Advertisement

ವೇದಿಕೆಯಲ್ಲೇ ಕಣ್ಣೀರು ಹಾಕಿದ ಮಂಡಳಿ ಅಧ್ಯಕ್ಷೆ

06:45 AM Jan 21, 2018 | Team Udayavani |

ಹುಬ್ಬಳ್ಳಿ: ಜನಪ್ರತಿನಿಧಿಗಳು ಸಹಕಾರ ನೀಡುತ್ತಿಲ್ಲ, ಅಧಿಕಾರಿಗಳು ಮೇಲಧಿಕಾರಿ ಮಾತಿಗೆ ಬೆಲೆ ನೀಡುತ್ತಾ
ಹೇಗಾದರೂ ಮಾಡಿ ಸಾಂಬಾರ ಮಂಡಳಿಯನ್ನು ಮುಚ್ಚಬೇಕು ಎನ್ನುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ವೇದಿಕೆ ಮೇಲೆ ಕಣ್ಣೀರಿಟ್ಟ ಘಟನೆ
ನಡೆಯಿತು.

Advertisement

ಇಲ್ಲಿನ ಮೂರುಸಾವಿರ ಮಠದ ಮೈದಾನದಲ್ಲಿ ಶನಿವಾರದಿಂದ ಆರಂಭಗೊಂಡ 8ನೇ ಒಣಮೆಣಸಿನ ಕಾಯಿ ಮೇಳದ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರಿಗೆ 2013ರಿಂದ ಇಲ್ಲಿಯವರೆಗೆ 21 ಕೋಟಿ ರೂ. ಅನುದಾನ
ಬಂದಿದ್ದು, ಅದನ್ನು ಠೇವಣಿ ಇರಿಸಿ ರೈತರಿಗೆ ಯಾವುದೇ ಸೌಲಭ್ಯ ನೀಡದೆ ಸುಳ್ಳು ಲೆಕ್ಕ ತೋರಿಸಿದ್ದಾರೆ. ಯಾವುದೇ
ಒಂದು ಕೆಲಸ ಮಾಡಬೇಕಾದರೂ ಜವಾನನಿಗೂ ಸಲಾಂ ಹೊಡೆಯುವ ಸ್ಥಿತಿ ತಂದಿಟ್ಟಿದ್ದಾರೆ. ಅಧ್ಯಕ್ಷೆ ಎನ್ನುವ
ಮರ್ಯಾದೆನೂ ಇಲ್ಲದಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next