Advertisement

ಬಿಸಿಸಿಐಗೆ ಸಿಒಎ ನೋಟಿಸ್‌ 

06:35 AM Jul 28, 2017 | Team Udayavani |

ನವದೆಹಲಿ: ಬುಧವಾರ ನಡೆದ ಬಿಸಿಸಿಐ ವಿಶೇಷ ಸಭೆಯಲ್ಲಿ ಸಿಇಒ ರಾಹುಲ್‌ ಜೊಹ್ರಿಗೆ ಪದಾಧಿಕಾರಿಗಳು ಪ್ರವೇಶ ನೀಡಿರಲಿಲ್ಲ. ಇದರಿಂದ ಸಿಟ್ಟಾಗಿರುವ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ಜೊಹ್ರಿಗೆ ಯಾಕೆ ಪ್ರವೇಶ ನೀಡಲಿಲ್ಲ ಎಂದು ಪ್ರಶ್ನಿಸಿ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಕಾರ್ಯದರ್ಶಿ ಅಮಿತಾಭ್‌ ಚೌಧರಿಗೆ ನೋಟಿಸ್ ನೀಡಿದ್ದಾರೆ.

Advertisement

ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಾರ್ಯದರ್ಶಿ ಚೌಧರಿ, ಜು.24ರ ಸುಪ್ರೀಂ ತೀರ್ಪಿನಲ್ಲಿ ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳಿಗೆ ಮಾತ್ರ ಪ್ರವೇಶ ನೀಡಿ ಎಂದು ತಿಳಿಸಲಾಗಿತ್ತು. ಆ ಕಾರಣದಿಂದಲೇ ಮೇಲಿನ ಬೆಳವಣಿಗೆ ನಡೆದಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next