Advertisement

ಆಂಧ್ರಕ್ಕೆ ಹೆಚ್ಚಿನ ಕೊಡುಗೆ ಕೊಡುತ್ತೇವೆ: ಸಚಿವ ಜೇಟ್ಲಿ

07:30 AM Mar 18, 2018 | |

ಹೊಸದಿಲ್ಲಿ: ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದಕ್ಕೆ ಪ್ರತಿಭಟಿಸಿ ಎನ್‌ಡಿಎಯಿಂದ ಟಿಡಿಪಿ ವಿದಾಯ ಹೇಳಿದ್ದರಿಂದ ಬಿಜೆಪಿ ಮೆತ್ತಗಾಗಿದೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕಿಂತ ಹೆಚ್ಚಿನ ಕೊಡುಗೆಗಳನ್ನು ನೀಡಲು ನಾವು ಸಿದ್ಧವಿದ್ದೇವೆ. ಆದರೆ ಅದನ್ನು ಪಡೆಯುವ ವಿಧಾನದ ಬಗ್ಗೆ ಆಂಧ್ರ ಸರಕಾರ ಯಾವ ಪ್ರಸ್ತಾವನೆಯನ್ನೂ ಕಳುಹಿಸಲಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಶನಿವಾರ ಮಾತನಾಡಿದ ಅವರು ಮಾತನಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್‌ ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ಆಂಧ್ರಕ್ಕೆ ನಾವು ನೀಡಿದ ಕೊಡುಗೆಗಳು ಮತ್ತು ಮುಂದೆ ನೀಡಲಿರುವ ಅನುದಾನಗಳ ಬಗ್ಗೆ ಜನರಿಗೆ ತಿಳಿಸುತ್ತೇವೆ. ವಿಶೇಷ ಸ್ಥಾನಮಾನಕ್ಕಿಂತ ಹೆಚ್ಚಿನ ಅನುದಾನ ನೀಡಲು  ನಾವು ಸಿದ್ಧವಿದ್ದೇವೆ. ಎನ್‌ಡಿಎ ಜತೆಗೆ ಪುನಃ ಸೇರಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಟಿಡಿಪಿ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next