Advertisement

Modi ಸರಕಾರ ಹೆಚ್ಚು ದಿನ ಬಾಳಿಕೆ ಬರಲ್ಲ: ಅಖೀಲೇಶ್‌, ಮಮತಾ

12:29 AM Jul 22, 2024 | Team Udayavani |

ಕೋಲ್ಕತಾ: ಸ್ಥಿರತೆಯಿಲ್ಲದ ಕೇಂದ್ರ ಸರಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದು ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೋಲ್ಕತಾದಲ್ಲಿ ರವಿವಾರ ಹುತಾತ್ಮರ ದಿನದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಖೀಲೇಶ್‌, ಸದ್ಯ ಅಧಿಕಾರಕ್ಕೆ ಬಂದವರು ಅತಿಥಿಗಳಂತೆ ಶೀಘ್ರವೇ ವಾಪಸಾಗು ತ್ತಾರೆ. ಕೋಮುವಾದಿ ಶಕ್ತಿಗಳಿಗೆ ತಾತ್ಕಾಲಿಕ ಯಶಸ್ಸು ಸಿಗಬಹುದು. ಅಂತ್ಯದಲ್ಲಿ ಅದು ಸೋಲಲೇಬೇಕು ಎಂದಿದ್ದಾರೆ. ಇದೇ ವೇಳೆ ಮಮತಾ ಧ್ವನಿಗೂಡಿಸಿ, ಕೇಂದ್ರ ಸರಕಾರ ಹೆಚ್ಚು ದಿನ ಉಳಿಯಲ್ಲ ಎಂದರು. ಬಾಂಗ್ಲಾದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದರಿಂದ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ದೀದಿ ಘೋಷಿಸಿದ್ದಾರೆ. ನಿರಾಶ್ರಿತರು ನೆಲೆ ಹುಡುಕಿ ರಾಜ್ಯಕ್ಕೆ ಬಂದರೆ ಅವರಿಗೆ ನೆರವು ನೀಡಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next