Advertisement

ಕೇಂದ್ರದಿಂದ ಅದ್ಯಾದೇಶ?

10:23 AM Sep 24, 2018 | Team Udayavani |

ಹೊಸದಿಲ್ಲಿ: ಉದ್ದಿಮೆ ಸ್ನೇಹಿ ಸೂಚ್ಯಂಕದಲ್ಲಿ ಭಾರತದ ರ್‍ಯಾಂಕಿಂಗ್‌ ಅನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ವಾಣಿಜ್ಯಿಕ ವಿವಾದಗಳನ್ನು ಶೀಘ್ರವಾಗಿ ಪರಿಹರಿಸಲು ಅಧ್ಯಾದೇಶ ಹೊರಡಿಸಲು ಮುಂದಾಗಿದೆ. ಮಧ್ಯಸ್ಥಿಕೆದಾರರಿಗೆ ಹೆಚ್ಚಿನ ಹೊಣೆಗಾರಿಕೆ ವಹಿಸುವ ಹಾಗೂ ನಿಗದಿತ ಅವಧಿಯಲ್ಲಿ ವಿವಾದ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಸರಕಾರ ಮುಂದಾಗಿದೆ. ಅದಕ್ಕೆ ಸಂಬಂಧಿಸಿದ ಮಧ್ಯಸ್ಥಿಕೆ ಕಾಯ್ದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಇದೆ. ವಾಣಿಜ್ಯಿಕ ವಿವಾದಗಳನ್ನು ಶೀಘ್ರ ಮತ್ತು ಕಾಲಮಿತಿಯಲ್ಲಿ ಬಗೆಹರಿಸುವುದು ಹಾಗೂ ಭಾರತವನ್ನು ವಿಶ್ವದ ಮತ್ತು ದೇಶೀಯ ವಾಣಿಜ್ಯ ವಿವಾದ ಪರಿಹಾರ ಮಾಡುವ ಪ್ರಮುಖ ಕೇಂದ್ರವನ್ನಾಗಿಸುವ ಗುರಿ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next