Advertisement

ಗಣರಾಜ್ಯೋತ್ಸವ ಸಂವಿಧಾನ ಜಾರಿ ದಿನವಾಗಿ ಆಚರಿಸಿ

07:46 AM Jan 27, 2019 | Team Udayavani |

ಆನೇಕಲ್‌: ಗಣರಾಜ್ಯೋತ್ಸವವನ್ನು ಸಂವಿಧಾನ ಜಾರಿ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಪ್ರಜಾ ವಿಮೋಚನ ಚಳವಳಿ ಸಂಘಟನೆ ರಾಜ್ಯಾಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಒತ್ತಾಯಿಸಿದರು.ಪಟ್ಟಣದಲ್ಲಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಸಂವಿಧಾನದ ಜಾರಿ ದಿನಾಚರಣೆಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

Advertisement

ದೇಶಕ್ಕೆ ದೊಡ್ಡ ಸಂವಿಧಾನ ನೀಡಿದ ಮಹಾನ್‌ ಮಾನವತಾವಾದಿ ಡಾ.ಅಂಬೇಡ್ಕರ್‌ ಎಲ್ಲಾ ಸಮು ದಾಯಗಳಿಗೆ ಅನುಕುಲವಾಗುವಂತೆ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ವಿಚಾರ ಧಾರೆಯ ಪುಸ್ತಕಗಳು ದೇಶದಾದ್ಯಂತ ಎಲ್ಲಾ ರಾಜ್ಯಗಳ ಭಾಷೆಗಳಿಗೆ ಅನುವಾದಿಸಿ ಪ್ರಚಾರ ಮಾಡಬೇಕು ಎಂದು ಆಗ್ರಹಿಸಿದರು.

ನಿರುದ್ಯೋಗ್ಯ ಭತ್ಯೆ ನೀಡಿ: ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿದರೆ ಸ್ವಲ್ಪ ಸಮಾನತೆಯನ್ನು ಕಾಣಬಹುದು. ನಿರುದ್ಯೋಗಿ ಯುವಕರಿಗೆ ನಿರು ದ್ಯೋಗ್ಯ ಭತ್ಯೆ ನೀಡಲು ಸರ್ಕಾರಗಳು ಮುಂದಾ ಗಬೇಕೆಂದು ಸಲಹೆ ನೀಡಿದರು.

ಕೇಂದ್ರದ ಕ್ರಮಕ್ಕೆ ಖಂಡನೆ: ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಡಾ.ಅಂಬೇ ಡ್ಕರ್‌ ಭಾವಚಿತ್ರವನ್ನು ಬಳಸದಿರುವುದನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿಯವರು ದಲಿತರಿಗೆ ಯಾವ ರೀತಿ ನ್ಯಾಯ ಕೊಡುತ್ತಾರೆ ಎಂಬ ಅನು ಮಾನ ಕಾಡುತ್ತಿದೆ. ಇಂತಹ ಧೋರಣೆಯನ್ನು ಖಂಡಿಸುತ್ತೇವೆ. ಸಂವಿಧಾನವನ್ನು ಜಾರಿಗೆ ತಂದ ದಿನವೇ ಅಂಬೇಡ್ಕರ್‌ ಭಾವಚಿತ್ರವಿಲ್ಲದಂತೆ ಮಾಡಿ ದ ಕೇಂದ್ರದ ಧೋರಣೆ ವಿಚಿತ್ರವಾಗಿದೆ. ದೇಶದಲ್ಲಿ ಸಂವಿಧಾನದಿಂದ ನಾನು ಗೆದ್ದು ಬಂದೆ ಎಂದು ಹೇಗೆ ಅವರು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಇಂಗ್ಲಿಷ್‌ ಮಾಧ್ಯಮ ಸ್ತುತ್ಯಾರ್ಹ: ರಾಜ್ಯ ಸರ್ಕಾರ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿಗೆ ತರಲು ಹೊರಟಿರುವುದು ಶ್ಲಾಘನೀಯ ಕ್ರಮವಾಗಿದೆ. ಇದರಿಂದ ದೀನ, ದಲಿತರೂ ಉತ್ತ ಮ ಶಿಕ್ಷಣ ಪಡೆಯಲು ಸಾದ್ಯವಾಗಲಿದೆ. ಕೇವಲ ಮಾತನಾಡುವ ಬದಲು ಯೋಜನೆಗಳು ಕಾರ್ಯರೂ ಪಕ್ಕೆ ಬಂದಾಗ ಪ್ರಯೋಜನವಾಗಲಿವೆ ಎಂದರು.

Advertisement

ಬೆಂಗಳೂರು ವಿಭಾಗೀಯ ಅಧ್ಯಕ್ಷ ಯಡವನ ಹಳ್ಳಿ ಕೃಷ್ಣಪ್ಪ ಮಾತನಾಡಿ, ಸಂವಿಧಾನ ರಚನೆಗೆ ಅನೇಕ ಮಹಾನೀಯರು ದುಡಿದಿದ್ದಾರೆ. ಅದರಲ್ಲಿ ಬಹಳ ಮುಖ್ಯವಾದವರು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌. ಆದರೆ, ದೇಶದಲ್ಲಿ ಕೇವಲ ಗಾಂಧೀಜಿ ಯವರನ್ನೇ ಮಾತ್ರ ಬಿಂಬಿಸಿ, ಅಂಬೇಡ್ಕರ್‌ರನ್ನು ಕಡೆಗಣಿಸಲಾಗಿದೆ. ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಮಹನೀಯರು ಸೀಮಿತವಾಗಬಾರದು ಎಂದು ತಿಳಿಸಿದರು.

ಬೆಂಗಳೂರು ಜಿಲ್ಲಾಧ್ಯಕ್ಷ ಅಧ್ಯಕ್ಷ ಕೊಪ್ಪಗೇಟ್ ರಾಮಾಂಜಿನಪ್ಪ, ಕಸಬಾ ಹೋಬಳಿ ಅಧ್ಯಕ್ಷ ಯಲ್ಲಪ್ಪ, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್‌, ಸಂಘಟನೆ ಮುಖಂಡರಾದ ರಾಜಪ್ಪ, ಕೊಪ್ಪ ಗೋಪಿ, ವಜ್ರಪ್ಪ, ಮಡಿವಾಳ ನಾಗರಾಜು, ಮಂಜು ನಾಥ್‌, ಪ್ರಸನ್ನ, ರಾಜು, ಮುರಳಿ ಮತ್ತು ಉಪೇಂದ್ರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next