Advertisement

ರಮೇಶ್‌ ಈಗ ಏಕೆ ಒಪ್ಪಿಕೊಂಡಿದ್ದಾರೋ ಗೊತ್ತಿಲ್ಲ: ಮಾಜಿ ಶಾಸಕ ನಾಗರಾಜು

01:21 PM May 26, 2021 | Team Udayavani |

ನೆಲಮಂಗಲ: “ಮಾಜಿ ಸಚಿವ ರಮೇಶ್‌ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಅಚ್ಚರಿಮೂಡಿಸುವ ಅನೇಕ ಹೇಳಿಕೆ ನೀಡಿದ್ದ ಆಪ್ತ ಮಾಜಿ ಶಾಸಕ ಎಂ.ವಿ.ನಾಗರಾಜು,ಸಿಡಿ ಬಗ್ಗೆ ಗೊತ್ತಿಲ್ಲ ಅಂದ್ರು,ಈಗ ಏಕೆ ಹೇಳಿದ್ದಾರೆ ಗೊತ್ತಿಲ್ಲ.ವಿಚಾರಿಸುವೆ’ ಎಂದಿದ್ದಾರೆ.

Advertisement

ನಗರಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಎಂ.ವಿ.ನಾಗರಾಜು ಸುದ್ದಿಗಾರರ ಪ್ರಶ್ನೆಗೆಪ್ರತಿಕ್ರಿಯಿಸಿದರು. 4 ತಿಂಗಳ ಹಿಂದೆಯೇ ಸಿಡಿ ಬಗ್ಗೆ ಮಾಹಿತಿ ಬಂದಾಗ ಬಾಲಚಂದ್ರ ಜಾರಕಿಹೊಳಿ ಅವರು ಕೇಳಿಕೊಂಡು ಬರಲು ಹೇಳಿದ್ದರು. ನಾನು ಕೇಳಿದಾಗ, ಆ ರೀತಿ ಕೆಲಸ ಮಾಡುವುದಿಲ್ಲ, ನೀವು ಅಂಜಬೇಡಿ. ನಾನು ಆ ರೀತಿ ಕೆಟ್ಟ ಕೆಲಸ ಮಾಡಿಲ್ಲ ಎಂದಿದ್ದರು. ಅವರ ತಮ್ಮನಿಗೂ ಹೇಳಲಿಲ್ಲ, ನನಗೂ ಹೇಳಲಿಲ್ಲ.

ಅದನ್ನು ಮಾಧ್ಯಮದವರ ಮುಂದೆ ಹೇಳಿದ್ದೆ. ಆದರೆ, ಈಗ ಒಪ್ಪಿಕೊಂಡಿರುವುದು ಗೊತ್ತಿಲ್ಲ. ಅವರು ವೈಯಕ್ತಿಕವಾಗಿ ಏನು ಮಾಡಿಕೊಂಡಿದ್ದಾರೆಯೋ ಗೊತ್ತಿಲ್ಲ, ರಾಜ ಕೀಯವಾಗಿ ಹತ್ತಿರವಿದ್ದನು ಈ ರೀತಿಯವಿಚಾರದಲ್ಲಿ ನಾನು ಎಂಟ್ರಿ ಆಗುತ್ತಿರಲಿಲ್ಲ.ರಾಜಕೀಯವಾಗಿ ಮುಂದುವರಿಯಬೇಕಾಗಿದೆ ವಾಸ್ತವಾಂಶ ಒಪ್ಪಿಕೊಂಡಿರಬೇಕು, ನಾನು ಬೆಂಗಳೂರಿಗೆ ಬಂದಾಗ ಭೇಟಿ ಮಾಡುತ್ತಿದ್ದೆ.ರಾಜಕೀಯವಾಗಿ ಗೊತ್ತು ಅಷ್ಟೇ ಪಾರ್ಟಿಗೆ ಒಪ್ಪಿಸಿ ಸೇರಿಸಿದ್ದು ನಾನೇ ಎಂದರು.

ಸೇಫ್  ಆಗಲು ಹೇಳಿರಬೇಕು: ರಮೇಶ್‌ಜಾರಕಿಹೊಳಿ ಮೇಲೆ ರಾಜಕೀಯ ಷಡ್ಯಂತ್ರ ನಡೆದಿದೆ. ಅವರು ರಾಜಕೀಯವಾಗಿ ಬೆಳೆಯಬಾರದು ಎಂದು ಈ ರೀತಿಮಾಡಿದ್ದಾರೆ. ಇದರಿಂದ ಸೇಫ್ ಆಗಲು ಒಪ್ಪಿಕೊಂಡಿರಬೇಕು ಎಂದರು

Advertisement

Udayavani is now on Telegram. Click here to join our channel and stay updated with the latest news.

Next