Advertisement

ಶಿಲಾಂಗ್‌ನಲ್ಲಿ ಮುಗಿದ 5ನೇ ದಿನದ ತನಿಖೆ: ಕೋಲ್ಕತಕ್ಕೆ ಮರಳಿದ ಕುಮಾರ್‌

10:26 AM Feb 13, 2019 | udayavani editorial |

ಮೇಘಾಲಯ : ಕೋಲ್ಕತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರನ್ನು ಇಂದು ಬುಧವಾರ ಮೂರು ತಾಸು ಕಾಲ ಪ್ರಶ್ನಿಸುವ ಮೂಲಕ ಸಿಬಿಐ ತನ್ನ ಐದು ದಿನಗಳ ತನಿಖಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. 

Advertisement

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಶಿಲಾಂಗ್‌ನಲ್ಲಿ ತನಿಖಾ ಪ್ರಕ್ರಿಯೆ ಮುಗಿದಿರುವುದನ್ನು ಅನುಸರಿಸಿ ರಾಜೀವ್‌ ಕುಮಾರ್‌ ಅವರಿಂದು ಕೋಲ್ಕತಕ್ಕೆ ಮರಳುವರು. 

ಶಾರದಾ ಚಿಟ್‌ ಫ‌ಂಡ್‌ ಸಂಬಂಧದ ಸಿಬಿಐ ತನಿಖೆಗೆ ಹಾಜರಾಗಲು ಕೋಲ್ಕತ ಪೊಲೀಸ್‌ ಕಮಿಷನರ್‌ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕಳೆದ ಶನಿವಾರವೇ ಶಿಲಾಂಗ್‌ ಗೆ ಆಗಮಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next