Advertisement

ರಾಜಕೀಯದಲ್ಲಿ  ಜಾತಿ ಲೆಕ್ಕಾಚಾರ ಹೆಚ್ಚಾಗಿದೆ: ಪೇಜಾವರ ಶ್ರೀ ಬೇಸರ

06:00 AM Jun 13, 2018 | |

ರಾಮನಗರ: ರಾಜಕೀಯದಲ್ಲಿ ಜಾತಿ ಮುಖ್ಯ ವಾಗಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಇಷ್ಟು ಜಾತಿ ಲೆಕ್ಕಾಚಾರ ಗಳು ಇರಲಿಲ್ಲ. ಇಂದು ಅದು ಅತಿಯಾಗಿದೆ. ಪ್ರತಿಯೊಂದನ್ನು ಜಾತಿ ದೃಷ್ಟಿಯಿಂದ ನೋಡುವುದು ತಪ್ಪು. ಇಂದು ರಾಜಕಾರಣದಲ್ಲಿ ಜಾತಿ ಲೆಕ್ಕಾಚಾರ ಹೆಚ್ಚಾಗಿದ್ದು  ಈ ಬಗ್ಗೆ ತಮಗೆ ಬೇಸರವಿದೆ ಎಂದರು.  

Advertisement

ತಾವೆಂದೂ ಚುನಾವಣಾ ರಾಜಕೀಯಕ್ಕೆ ಮುಂದಾಗಿಲ್ಲ. ಎಲ್ಲ ಪಕ್ಷದವರು ತಮ್ಮ ಸಂಪರ್ಕದಲ್ಲಿದ್ದಾರೆ.  ಧರ್ಮ, ಆಧ್ಯಾತ್ಮಿಕ ಪ್ರಚಾರ, ಸಮಾಜಸೇವೆ ಮಾಡುವುದು ತಮ್ಮ  ಕೆಲಸ, ಚುನಾವಣಾ ರಾಜಕೀಯ ಮಾಡುವುದಲ್ಲ. ರಾಜಕಾರಣಿಗಳು ತಾವಾಗಿಯೇ ಕೇಳಿದರೆ ಮಾರ್ಗದರ್ಶನ, ಸಲಹೆ ನೀಡುವುದಾಗಿ ತಿಳಿಸಿದರು. 

ತಾವು ಏರ್ಪಡಿಸಿದ್ದು ಇಫ್ತಾರ್‌ ಕೂಟವಲ್ಲ, ಸ್ನೇಹಕೂಟ ಭೋಜನ. ಈ ವರ್ಷ ಎಲ್ಲ ಅಲ್ಪಸಂಖ್ಯಾಕ ಸಮುದಾಯದವರನ್ನು ಕರೆದು ಭೋಜನ ಕೊಡುವುದಾಗಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next