Advertisement

Case Filed: ಮಣಿಪುರ ಸಿಎಂಗೆ ಬೆದರಿಕೆ: ಲೋಕಸಭಾ ಚುನಾವಣಾ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು

08:46 AM Apr 05, 2024 | Team Udayavani |

ಇಂಫಾಲ್: ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪದ ಮೇಲೆ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ರಾಷ್ಟ್ರೀಯ ಜನಹಿತ್ ಸಂಘರ್ಷ ಪಕ್ಷದ (RJSP) ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ಟಿವಿ ವಾಹಿನಿಯೊಂದು ಏಪ್ರಿಲ್ 2 ರಂದು ಆಯೋಜಿಸಲಾಗಿದ್ದ ನೇರ ಚರ್ಚೆಯ ಸಂದರ್ಭದಲ್ಲಿ ಆರ್ ಜೆಎಸ್ಪಿ ಪಕ್ಷದ ನಾಯಕ ಮೊಯಿರಾಂಗ್ಥೆಮ್ ಟೊಟೊಮ್ಸಾನಾ (50) ಎಂದು ಗುರುತಿಸಲ್ಪಟ್ಟ ಅಭ್ಯರ್ಥಿಯು ಈ ಹೇಳಿಕೆಯನ್ನು ನೀಡಿದ್ದಾರೆ.

ಇಂಫಾಲ್ ಪೂರ್ವದ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಖುಮಾಂತೇಮ್ ಡಯಾನಾ ದೇವಿ ಅವರು ಇಂಫಾಲ್ ಪಶ್ಚಿಮದ ಪೊಲೀಸ್ ಅಧೀಕ್ಷಕರಿಗೆ (ಎಸ್‌ಪಿ) ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದ ನಂತರ ಟೊಟೊಮ್ಸಾನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Meera Jasmine: ನಟಿ ಮೀರಾ ಜಾಸ್ಮಿನ್ ತಂದೆ ಜೋಸೆಫ್ ಫಿಲಿಪ್ ವಿಧಿವಶ

Advertisement

Udayavani is now on Telegram. Click here to join our channel and stay updated with the latest news.

Next