Advertisement

#Kiccha47 ಚಿತ್ರಕ್ಕೆ ಕಾಲಿವುಡ್‌ ಪ್ರೊಡಕ್ಷನ್ ನಿಂದ ಬಂಡವಾಳ: ಯಾವಾಗ ಸಟ್ಟೇರುತ್ತೆ ಸಿನಿಮಾ?

12:33 PM Jul 08, 2023 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ ಅವರ #Kiccha46 ಸಿನಿಮಾದ ಟೀಸರ್‌ಸ ಸದ್ದು ಮಾಡುತ್ತಿದೆ. ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಕಿಚ್ಚ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಗ್ಗೆ ಈಗಾಗಲೇ ಹೈಪ್‌ ಕ್ರಿಯೇಟ್‌ ಆಗಿದೆ.

Advertisement

ಲಾಂಗ್‌ ಗ್ಯಾಪ್‌ ಬಳಿಕ ಸುದೀಪ್‌ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಮೂರು ಸಿನಿಮಾದ ಸ್ಕ್ರಿಪ್ಟ್‌ ಗೆ ಅವರು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಇದರಲ್ಲಿ ಮೊದಲ ಸಿನಿಮಾವಾಗಿ  #Kiccha46 ಅನೌನ್ಸ್‌ ಆಗಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಸಿನಿಮಾದ ಬಗ್ಗೆಯೂ ಗಾಂಧಿನಗರದಲ್ಲಿ ಮಾತುಗಳು ಆರಂಭವಾಗಿದೆ. ಮುಂದಿನ ಸಿನಿಮಾದ ಅಂದರೆ #Kiccha47 ಯಾರೊಂದಿಗೆ ಎನ್ನುವ ಚರ್ಚೆಗಳು ಶುರುವಾಗಿದೆ.

ಟಿಜಿ ತ್ಯಾಗರಾಜನ್ ಅವರ ತಮಿಳಿನ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲಂಸ್  2020 ರ ಫೆಬ್ರವರಿಯಲ್ಲಿ ಕನ್ನಡ ಸಿನಿಮಾವೊಂದನ್ನು ನಿರ್ಮಾಣ ಮಾಡುವುದಾಗಿ ಅನೌನ್ಸ್‌ ಮಾಡಿತ್ತು. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ 123 ನೇ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಹೇಳಿತ್ತು. ರವಿ ಅರಸು ನಿರ್ದೇಶನದ ಈ ಸಿನಿಮಾ ಮುಹೂರ್ತದ ನಂತರ ಮುಂದುವರೆಯಲು ಆಗದ ಕಾರಣ, ಅಲ್ಲೇ ಸ್ಥಗಿತಗೊಂಡಿತ್ತು.

ಇದನ್ನೂ ಓದಿ:  ʼAdipurushʼ ನಿಂದ ಜನರ ಭಾವನೆಗೆ ಧಕ್ಕೆಯಾಗಿದೆ ಕೈಮುಗಿದು ಕ್ಷಮೆ ಕೇಳುತ್ತೇನೆಂದ ಸಂಭಾಷಣೆಕಾರ

ಇದಾದ ಬಳಿಕ ಮತ್ತೆ ಕನ್ನಡ ಸಿನಿಮಾದತ್ತ ತಲೆ ಹಾಕದ ಸಂಸ್ಥೆ ಇದೀಗ ಕಿಚ್ಚ ಅವರ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಅನೂಪ್ ಭಂಡಾರಿ ಅವರ “ಬಿಲ್ಲ ರಂಗ ಬಾಷಾ” ಕಿಚ್ಚ ಅವರ ಮುಂದಿನ ಸಿನಿಮಾ ಎನ್ನಲಾಗಿದೆ. ಈ ಸಿನಿಮಾ ತೆಲುಗು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಹಯೋಗದಿಂದ ಬರಲಿದೆ ಎನ್ನಲಾಗಿದೆ. ರೆ ಈ ಸಿನಿಮಾ ಭವಿಷ್ಯದಲ್ಲಿ ನಡೆಯುವ ಕಥೆಯಾಗಿರುವುದರಿಂದ ಮತ್ತು ಸೆಟ್‌ಗಳಲ್ಲಿ ಚಿತ್ರೀಕರಿಸಬೇಕಾಗಿರುವುದರಿಂದ ಪ್ರಿ-ಪ್ರೊಡಕ್ಷನ್‌ಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಅದರಿಂದ ಇದು ವಿಳಂಬವಾಗುವ ಸಾಧ್ಯತೆಯಿದೆ.

Advertisement

#Kiccha47 ಸಿನಿಮಾವನ್ನು ಟಿಜಿ ತ್ಯಾಗರಾಜನ್ ಅವರ ತಮಿಳಿನ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲಂಸ್ ನಿರ್ಮಾಣ ಮಾಡಲಿದೆ ಎನ್ನಲಾಗಿದೆ. ಈ ಸಿನಿಮಾ “ಬಿಲ್ಲ ರಂಗ ಬಾಷಾ” ಸಿನಿಮಾಕ್ಕಿಂತ ಮೊದಲೇ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಅಂದಹಾಗೆ ಈ ಸಿನಿಮಾವನ್ನು ವೆಂಟಕ್‌ ಪ್ರಭು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸುದೀಪ್‌ ಅವರಿಗೆ ವೆಂಕಟ್‌ ಪ್ರಭು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು.

ವಿಜಯ್ ಕಾರ್ತಿಕೇಯ ನಿರ್ದೇಶನದ ಕಲೈಪುಲಿ ಎಸ್ ಥಾನು ನಿರ್ಮಾಣದ “#Kiccha46” ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿ ಆರಂಭವಾಗಲಿದೆ. ಈ ಸಿನಿಮಾದ ಬಳಿಕ ಕಿಚ್ಚ ಬಿಗ್‌ ಬಾಸ್‌ ಕಾರ್ಯಕ್ರಮದ ನಿರೂಪಣೆಯಲ್ಲಿ ಬ್ಯುಸಿಯಾಗಲಿದ್ದು, ಆ ಬಳಿಕವೇ #Kiccha47 ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.

ಸದ್ಯ ಸತ್ಯ ಜ್ಯೋತಿ ಫಿಲಂಸ್  ಧನುಷ್‌ ಅವರ “ಕ್ಯಾಪ್ಟನ್‌ ಮಿಲ್ಲರ್”‌ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಅವರು ಕೂಡ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next