Advertisement

ಕೆನಡಾ ಓಪನ್‌: ಮನು, ಸುಮಿತ್‌ ಜೋಡಿ ಕ್ವಾರ್ಟರ್‌ಗೆ

04:00 AM Jul 15, 2017 | |

ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್‌ ಡಬಲ್ಸ್‌ ಜೋಡಿಯಾದ ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ ಕೆನಡ ಓಪನ್‌ ಗ್ರ್ಯಾನ್‌ ಪ್ರೀ ಕೂಟದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಭರವಸೆ ಮೂಡಿಸಿದ್ದ ಎಚ್‌.ಎಸ್‌.ಪಣಯ್‌, ಪಿ.ಕಶ್ಯಪ್‌ ಹೊರಬಿದ್ದಿದ್ದಾರೆ.
 
ಶುಕ್ರವಾರ ನಡೆದ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮನು ಅತ್ರಿ ಮತ್ತು ಸುಮಿತ್‌ ರೆಡ್ಡಿ ಜೋಡಿ 21-17, 17-21, 21-13 ರಿಂದ ಕೊರಿಯಾದ ಚಾಯ್‌ ಸಾಲೂYé ಮತ್ತು ಜೇ ಹ್ವಾನ್‌ ಕಿಮ್‌ ವಿರುದ್ಧ ಗೆಲುವು ಸಾಧಿಸಿದರು. ಮೊದಲ ಗೇಮ್‌ ಗೆದ್ದ ಭಾರತದ ಜೋಡಿ 2ನೇ ಗೇಮ್‌ ಕಳೆದುಕೊಂಡಿತ್ತು. ಹೀಗಾಗಿ ನಿರ್ಣಾಯಕವಾಗಿದ್ದ 3ನೇ ಗೇಮ್‌ನಲ್ಲಿ ಭಾರತ ಜೋಡಿ ಭರ್ಜರಿ ಹೋರಾಟದ ಮೂಲಕ ವಶಪಡಿಸಿಕೊಂಡು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿತು. 

Advertisement

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಎಚ್‌.ಎಸ್‌.ಪ್ರಣಯ್‌ 21-17, 14-21, 13-21 ರಿಂದ ಕೊರಿಯಾದ ಜಿಯಾನ್‌ ಜಿನ್‌ ಹ್ಯುಕ್‌ ವಿರುದ್ಧ ಸೋತಿದ್ದಾರೆ. ಮತ್ತೂಂದು ಸಿಂಗಲ್ಸ್‌ನಲ್ಲಿ ಕಶ್ಯಪ್‌ ಕೂಡ ಸೋಲುಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next