Advertisement

ಕಾಂಗ್ರೆಸ್‌ನಿಂದ ಸ್ಪರ್ಧಿಸಲಾರೆ : ಮಹಿಮಾ ಜೆ.ಪಟೇಲ್‌

12:19 AM Mar 17, 2019 | |

ದಾವಣಗೆರೆ: ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುವಂತೆ ಮಾಜಿ ಸಚಿವರಿಂದ ಆಹ್ವಾನ ಬಂದಿದೆ. ಆದರೆ, ಆ ಪಕ್ಷದಿಂದ ಸ್ಪರ್ಧಿಸಲು ತಮಗೆ ಇಷ್ಟವಿಲ್ಲ ಎಂದು ಜೆಡಿಯು ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಹಿಂದೆ ನನಗೆ ಕಾಂಗ್ರೆಸ್‌ ನಿಂದ ಕೆಟ್ಟ ಅನುಭವ ಆಗಿದೆ. ಒಮ್ಮೆ ಆ ಪಕ್ಷ ತೊರೆದ ಮೇಲೆ ಮತ್ತೆ ಅಲ್ಲಿ ಹೋಗಿ ಸ್ಪರ್ಧಿಸುವುದು ಸರಿಯಲ್ಲ. ಹಾಗಾಗಿ, ಮಾಜಿ ಸಚಿವರ ಆಹ್ವಾನ
ನಿರಾಕರಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ಸಿಕ್ಕ ಕಾಂಗ್ರೆಸ್‌ ಟಿಕೆಟ್‌ನ್ನು ತಪ್ಪಿಸಲಾಯಿತು. ಹಾಗಾಗಿ, ನಾನು ಜೆಡಿಎಸ್‌ ನಿಂದ ಸ್ಪರ್ಧೆ ಮಾಡಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next