Advertisement

ಸೇವಾ ಮನೋಭಾವ ಬೆಳೆಸಿಕೊಳ್ಳಲು ಶಿಕ್ಷಕರಿಗೆ ಕರೆ

05:26 PM Aug 18, 2017 | |

ಜೇವರ್ಗಿ: ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ತತ್ವದ ಆಧಾರದ ಮೇಲೆ ಶಿಸ್ತು ಹಾಗೂ
ರಾಷ್ಟ್ರೀಯತೆ ಬೆಳೆಸುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯವಾಗಿದೆ ಎಂದು ತಹಶೀಲ್ದಾರ ಯಲ್ಲಪ್ಪ ಸುಬೇದಾರ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಹಾಗೂ ಭಾರತ ಸೇವಾದಳ ತಾಲೂಕು ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 2017-18ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ಮಿಲಾಪ ಶಿಬಿರದಲ್ಲಿ ಹಡೇìಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಭಾರತ ಸೇವಾದಳಯುವಕರನ್ನು ಆದರ್ಶ ನಾಗರಿಕರನ್ನಾಗಿ ಮಾಡಲು ಸಂಯಮ, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಪೂರ್ಣ ಸೇವಾ ಮನೋಭಾವ ಮೂಡಿಸುತ್ತದೆ. ಅಲ್ಲದೇ ಶಿಕ್ಷಣದ ಮೂಲಕ ಜನರ ಆರೋಗ್ಯ ಮತ್ತು ಶಾರೀರಿಕ ದೃಢತೆ ಬಳಗೊಳಿಸುತ್ತದೆ. ಜಾತೀಯ ಮತ್ತು ವರ್ಣೀಯ ಭಾವನೆ ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸಿ ರಾಷ್ಟ್ರೀಯತೆ ಹೆಚ್ಚಿಸುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಭಾರತ
ಸೇವಾದಳದಲ್ಲಿ ಪ್ರತಿಯೊಬ್ಬರೂ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಮಲ್ಲಣ್ಣ ಅವುಂಟಿ
ಕಾರ್ಯಕ್ರಮ ಉದ್ಘಾಟಿಸಿದರು. ಭಾರತ ಸೇವಾ ದಳದ ಅಧ್ಯಕ್ಷ ರಾಜಶೇಖರ ಸೀರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ವಸಂತರಾವ ನರಿಬೋಳ ಅವರ ಪದಗ್ರಹಣ ನೆರವೇರಿಸಿದರು. ಭಾರತ ಸೇವಾದಳದ ರಾಜ್ಯ ಉಪಾಧ್ಯಕ್ಷ ಶಿವಶರಣಪ್ಪ ಜಂಬೇರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಲಿಂಗರಾಜ ಮೂಲಿಮನಿ, ಡಾ| ಶಿವಲಿಂಗಪ್ಪ ಗೌಳಿ, ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಂಬಿನ್‌, ಅಬ್ದುಲ್‌ ರಹೇಮಾನ್‌ ಪಟೇಲ್‌, ಸುದರ್ಶನ ಆಲಬಾಳ, ಆಹಾರ ನಿರೀಕ್ಷಕ ಡಿ.ಬಿ. ಪಾಟೀಲ, ಹೇಮನೂರು ನಾಯಕ, ಮನೋಹರ ಕಾಮನಕೇರಿ, ಬಸವಂತ್ರಾಯ ಗಜಕೋಶ, ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ, ಡಾ| ಗಿರೀಶ ರಾಠೊಡ, ಡಾ| ವಿಷ್ಣುವರ್ಧನ, ಶಶಿಧರ ಯಡ್ರಾಮಿ, ಡಾ| ವಿನಾಯಕ, ಡಾ| ಕರಿಗೂಳೇಶ್ವರ, ವಿನೋದಕುಮಾರ, ಶಂಕರಲಿಂಗ ಕಲಶೆಟ್ಟಿ, ರವಿ ಕೋಳಕೂರ, ಮಹೇಶ ಬಸರಕೋಡ, ಅಮೃತ ಮಾಲಿಪಾಟೀಲ, ಮಲ್ಲನಗೌಡ ಕಲ್ಲೂರ, ಹಣಮಂತ್ರಾಯ ಕುಳಗೇರಿ, ಎಸ್‌. ಎಸ್‌. ಗೊಂಬಿಮಠ ಸೇರಿದಂತೆ ನೂರಾರು ಜನರು ಶಿಕ್ಷಕರು ಭಾಗವಹಿಸಿದ್ದರು. ತಾಲೂಕು  ನಾಯಕ ಲಾಲಪ್ಪ ನಾಯಕ ಸ್ವಾಗತಿಸಿದರು. ಶಿಕ್ಷಕ ಎಸ್‌.ಎಸ್‌. ಮಾಲಿಬಿರಾದಾರ ನಿರೂಪಿಸಿದರು. ಚಂದ್ರಶೇಖರ ಜಮಾದಾರ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next