Advertisement

ಜೇವರ್ಗಿ: ಎಸ್‌ಡಿಪಿಐ ಪ್ರತಿಭಟನೆ

10:27 AM Sep 12, 2017 | Team Udayavani |

ಜೇವರ್ಗಿ: ಪ್ರಗತಿಪರ ಚಿಂತಕಿ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು. ಬರ್ಮಾ ದೇಶದ ಮುಸ್ಲಿಂರ ಮೇಲೆ ನಡೆಯುತ್ತಿರುವ ಹತ್ಯೆ ತಡೆಯಬೇಕು ಹಾಗೂ ಪ್ರವಾದಿ ಮಹ್ಮದ್‌ ಪೈಗಂಬರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರ್‌ಎಸ್‌ಎನ್‌ ಸಿಂಗ್‌ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೋಸಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಪಟ್ಟಣದ ಅಖಂಡೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ತಾಲೂಕು ಅಧ್ಯಕ್ಷ ಮೊಹಿಯುದ್ದೀನ್‌ ಇನಾಮದಾರ, ದೇಶದಲ್ಲಿ ಮತ್ತು ರಾಜ್ಯದಲ್ಲಿ ದಲಿತರ ಮತ್ತು ಮುಸ್ಲಿಂರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಕೆಲ ಕೋಮುವಾದಿ ಶಕ್ತಿಗಳು ದೇಶ ಒಡೆಯಲು ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ಪತ್ರಿಕಾ ರಂಗದ ಕಗ್ಗೊಲೆಯಾದಂತಾಗಿದೆ. ಈ ನಾಡಿನಲ್ಲಿ ಪ್ರಗತಿಪರರು, ವಿಚಾರವಾದಿಗಳು, ಸಮಾಜ ಸುಧಾರಕರಿಗೆ ಭದ್ರತೆ ಇಲ್ಲದಂತಾಗಿದೆ. ಗೌರಿ ಲಂಕೇಶ ಹತ್ಯೆ ಪ್ರಕರಣವನ್ನು ಆದಷ್ಟು ಶೀಘ್ರ ಸಿಬಿಐಗೆ ಒಪ್ಪಿಸಬೇಕು. ಮುಸ್ಲಿಂರ ವಿರುದ್ಧ ಪ್ರಚೋಧನಕಾರಿ ಭಾಷಣ ತಡೆಗಟ್ಟಬೇಕು ಹಾಗೂ ಇಸ್ಲಾಂ ಧರ್ಮದ ಪ್ರವಾದಿ ಮಹ್ಮದ್‌ ಪೈಗಂಬರ್‌ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರ್‌ ಎಸ್‌ಎನ್‌ ಸಿಂಗ್‌ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶಾಹೀದ್‌ ನಶೀರ್‌, ಶರಫುದ್ಧೀನ್‌ ಮೌಲಾನಾ, ರಸೂಲ್‌ ಇನಾಮದಾರ್‌, ಅಹ್ಮದ್‌ ಹುಸೇನ್‌ ಭಾಗವಾನ್‌, ಕಾಶೀಂ ಪಟೇಲ್‌, ತಯ್ಯಬ್‌, ಸತ್ತಾರ ಇನಾಮದಾರ್‌, ಯಾಕೂಬ್‌, ರಹಿಂ ಸೇಠ ಭಾಗವಾನ್‌, ನಿಸಾರ್‌ ಇನಾಮದಾರ್‌, ಸಮೀಹಾಶ್ಮಿ, ರಫೀಕ್‌ ಜಮಾದಾರ, ಮಲ್ಲಿಕಾರ್ಜುನ, ಅಸ್ಲಾಂ ಭಾಗವಾನ್‌ ಸೇರಿದಂತೆ ಪಿಎಫ್‌ಐ, ಟಿಪ್ಪು ಸುಲ್ತಾನ್‌, ಅಮನ್‌ ಅಂಜುಮ್‌ ಅಲ್‌ ಮೊದದ್‌ ಸೊಸೈಟಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next