Advertisement

Crime: ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಹತ್ಯೆಗೈದ ಕ್ಯಾಬ್‌ ಚಾಲಕನ ಬಂಧನ

12:03 PM Aug 29, 2024 | Team Udayavani |

ಬೆಂಗಳೂರು: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಭೀಕರವಾಗಿ ಹತ್ಯೆಗೈದಿದ್ದ ಕ್ಯಾಬ್‌ ಚಾಲಕನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಕಿರಣ್‌(31) ಬಂಧಿತ.

ಆರೋಪಿ ಪತ್ನಿ ನವ್ಯಾಶ್ರೀ (28) ಯನ್ನು ಕತ್ತುಕೊಯ್ದು ಕೊಲೆಗೈದಿದ್ದ. ಭದ್ರಾವತಿ ಮೂಲದವರಾದ ಕಿರಣ್‌ ಮತ್ತು ನವ್ಯಾಶ್ರೀ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕಿರಣ್‌ ಕ್ಯಾಬ್‌ ಚಾಲಕನಾಗಿದ್ದು, ನವ್ಯಾಶ್ರೀ ನೃತ್ಯ ಶಿಕ್ಷಕಿಯಾಗಿದ್ದಳು. ಈ ಮಧ್ಯೆ ಪತಿ ಕಿರಣ್‌ ಸ್ನೇಹಿತ ಅನಿಲ್‌ ಆಗಾಗ್ಗೆ ಮನೆಗೆ ಬರುತ್ತಿದ್ದ. ಆಗ ನವ್ಯಾಶ್ರೀ, ಅನಿಲ್‌ ನಡುವೆ ಆತ್ಮೀಯತೆ ಬೆಳೆದು ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದಿದ್ದ ಕಿರಣ್‌, ಪತ್ನಿ ಮತ್ತು ಅನಿಲ್‌ಗೆ ಬುದ್ಧಿವಾದ ಹೇಳಿದ್ದಾನೆ. ಆದರೆ, ಕಿರಣ್‌ ಮುಂದೆಯೇ ಅನಿಲ್‌ನನ್ನು ಹೊಗಳುತ್ತಿದ್ದಳು. ಇದೇ ವಿಚಾರವಾಗಿ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮಲಗಿದಲ್ಲೇ ಕತ್ತು ಕೊಯ್ದ ಪತಿ! : ಮಂಗಳವಾರ ಬೆಳಗ್ಗೆ ತನ್ನ ಸ್ನೇಹಿತೆ ಐಶ್ವರ್ಯ ಎಂಬಾಕೆಗೆ ಕರೆ ಮಾಡಿದ ನವ್ಯಾಶ್ರೀ ಮನೆಗೆ ಬರುವಂತೆ ಕರೆಸಿಕೊಂಡಿದ್ದಾಳೆ. ಸ್ನೇಹಿತೆ ಐಶ್ವರ್ಯ ಮದ್ಯ ಸೇವಿಸಿ, ಮಲಗಿದ್ದಳು. ಅದೇ ವೇಳೆ ಮನೆಗೆ ಬಂದ ಪತಿ ಕಿರಣ್‌, ಪತ್ನಿ ನವ್ಯಶ್ರೀಗೆ ನೀನು ನನ್ನೊಂದಿಗೆ ಮಲಗಬೇಕು. ನಿನ್ನ ಸ್ನೇಹಿತೆಯನ್ನು ಹೊರಗಡೆ ಕಳುಹಿಸು ಎಂದಿದ್ದಾನೆ. ಆಗ ನವ್ಯಾಶ್ರೀ ನಿರಾಕರಿಸಿದ್ದು, ನೀನು ಹೊರಗಡೆಯೆ ಮಲಗು ಎಂದು ಗಲಾಟೆ ಮಾಡಿದ್ದು, ಆಗ ನವ್ಯಾಶ್ರೀ ಚಾಕುವಿನಿಂದ ಪತಿಗೆ ತೋರಿಸಿ ಹೆದರಿಸಿ, ತಲೆಯ ದಿಬ್ಬಿನ ಕೆಳಗೆ ಇಟ್ಟುಕೊಂಡು ಮಲಗಿದ್ದಾಳೆ. ಕೆಲ ಹೊತ್ತಿನ ಕೋಣೆಗೆ ಬಂದ ಆರೋಪಿ, ಅದೇ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಕೊಲೆಗೈದಿದ್ದಾನೆ. ಇನ್ನು ಮದ್ಯದ ಅಮಲಿನಲ್ಲಿ ಮಲಗಿದ್ದ ಐಶ್ವರ್ಯ ಈ ಘಟನೆ ಬಗ್ಗೆ ಅರಿವಿಲ್ಲ. ಮುಂಜಾನೆ ತನ್ನ ಬಟ್ಟೆ ಒದೆಯಾಗಿರುವುದು ಗೊತ್ತಾಗಿ ಎಚ್ಚರಗೊಂಡು ನೋಡಿದಾಗ ನವ್ಯಾಶ್ರೀ ಕೊಲೆಯಾಗಿ ರುವುದು ಕಂಡು ಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next