Advertisement

ಬಿಎಸ್‌ವೈ ಸಿಎಂ ಮಾಡಲು ಬಿಜೆಪಿಯಲ್ಲೇ ಇರುವೆ

10:38 AM Jul 21, 2017 | Team Udayavani |

ಬೆಂಗಳೂರು: ಬಿಜೆಪಿಯಲ್ಲಿಯೇ ಇರುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Advertisement

ಗುರುವಾರ ತಮ್ಮ 67ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿ. ಸೋಮಣ್ಣ ಅವರು, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು. ವಿಜಯನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ
ಮಾತನಾಡಿದ ಅವರು, ಕೆಲವರು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಇದರಿಂದ  ರಾಜಕೀಯ ಲಾಭ ಪಡೆಯಲು
ಯತ್ನಿಸುತ್ತಿದ್ದಾರೆ. ತಾವು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಚಾಮರಾಜನಗರ ಜಿಲ್ಲೆಗೆ ಏನಾದರೂ ಮಾಡಬೇಕೆಂಬ
ಬಯಕೆ ಇದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸುವುದಾಗಿ ಸೋಮಣ್ಣ ಹೇಳಿದರು. ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ಅವರು ಸೋಮಣ್ಣಗೆ ಶುಭ ಕೋರಿ ಮಾತನಾಡಿ, ಸೋಮಣ್ಣ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ವಿಧಾನಸಭೆಯಲ್ಲಿ ಇರುತ್ತಾರೆ. 

ಕಾಂಗ್ರೆಸ್‌ ಮುಖಂಡರನ್ನು ಬಿಜೆಪಿಗೆ ಕರೆ ತರುತ್ತಿರುವವರೇ ಸೋಮಣ್ಣ. ಕೆ.ಪಿ.ನಂಜುಂಡಿಯನ್ನು ಪಕ್ಷಕ್ಕೆ ಸೇರಿಸಿದವರೇ ಸೋಮಣ್ಣ. ಹೀಗಾಗಿ, ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು. ಆದರೆ, ಸೋಮಣ್ಣ ಅವರು ಕಾಂಗ್ರೆಸ್‌ ಸೇರಲು ಬಯಸಿದರೆ, ಸ್ವಾಗತಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. “ಸೋಮಣ್ಣ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದವರು, ಕಾಂಗ್ರೆಸ್‌ ಅವರಿಗೆ ಹೊಸತೇನಲ್ಲ. ಅವರು ಪಕ್ಷ ಸೇರುವುದಾದರೆ ನಮ್ಮದೇನೂ 
ಅಭ್ಯಂತರವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next