Advertisement

ಇಂದಿನಿಂದ ಬಸ್‌ ಸಂಚಾರ

05:56 AM May 19, 2020 | Suhan S |

ಕೊಪ್ಪಳ: ಸರ್ಕಾರ ಮಂಗಳವಾರದಿಂದ ಸಾರಿಗೆ ಬಸ್‌ ಸಂಚಾರಕ್ಕೆ ಆರಂಭವಾಗಲಿದೆ ಎಂದು ಘೋಷಿಸಿದ್ದು, ಕೊಪ್ಪಳ ಘಟಕದಿಂದಲೂ ಬಸ್‌ಗಳು ರಸ್ತೆಗಿಳಿಯಲಿವೆ.

Advertisement

ಜಿಲ್ಲೆಯ ವ್ಯಾಪ್ತಿಯೊಳಗೆ ಸೇರಿ ಅನ್ಯ ಜಿಲ್ಲೆಗಳಿಗೂ ಸಾರಿಗೆ ಸೇವೆ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ ಮಧ್ಯದಲ್ಲಿ ತಾಲೂಕು-ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಿಂದ-ತಾಲೂಕು ಕೇಂದ್ರಕ್ಕೆ ಮಾತ್ರ ಬಸ್‌ ಸಂಚಾರ ಆರಂಭಿಸಲಾಗಿತ್ತು. ಈಗ ಲಾಕ್‌ಡೌನ್‌ ಮುಕ್ತಾಯವಾಗಿದ್ದು, ತಾಲೂಕು- ಹೋಬಳಿ ಕೇಂದ್ರಗಳಿಗೆ ಬಸ್‌ಗಳ ಓಡಾಟಕ್ಕೆ ಕೊಪ್ಪಳ ಘಟಕವು ಯೋಜನೆ ರೂಪಿಸಿದೆ. ಮೇ 19ರಿಂದ ಜಿಲ್ಲೆಯ ಒಳಗೆ 35 ಬಸ್‌ ಗಳು ವಿವಿಧ ಘಟಕಗಳಿಂದ ಸಂಚಾರ ನಡೆಸಲಿವೆ. ಒಂದು ಬಸ್‌ನಲ್ಲಿ 25 ಜನ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಿದೆ.

ಈ ಮೊದಲು ಗ್ರಾಮೀಣ ನಿಲ್ದಾಣಗಳಲ್ಲಿ ಬಸ್‌ ಗಳನ್ನು ನಿಲ್ಲಿಸುತ್ತಿರಲಿಲ್ಲ. ಮೇ 19ರಿಂದ ಕೆಲವು ಹಳ್ಳಿಗಳಲ್ಲಿ ಬಸ್‌ ನಿಲುಗಡೆಯಾಗಲಿವೆ. ಇನ್ನು ಅನ್ಯ ಜಿಲ್ಲೆಗಳಿಗೂ ಬಸ್‌ಗಳ ಸಂಚಾರ ಆರಂಭಿಸಲು ಕೊಪ್ಪಳ ಘಟಕವುಮುಂದಾಗಿದ್ದು, ಹುಬ್ಬಳ್ಳಿ-02, ವಿಜಯಪುರ-04, ರಾಯಚೂರು-06, ಹೊಸಪೇಟೆ-04, ದಾವಣಗೆರೆ-02, ಹಿರೇಕೆರೂರು-01, ರೋಣ-01, ಗದಗ-04 ಬಸ್‌ಗಳು ಮೇ 19ರಿಂದ ಸಂಚಾರ ಆರಂಭಿಸಲಿವೆ. ಪ್ರತಿ ಬಸ್‌ನಲ್ಲಿ 25 ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next