Advertisement

ರಾಜಕೀಯ ನಾಯಕರ ವಾಗ್ಯುದ್ಧವನ್ನೂ ಮೀರಿಸುವಂತಿತ್ತು ಗೂಳಿಗಳ ಕಾದಾಟ!

12:09 PM May 09, 2023 | Team Udayavani |

ಗದಗ: ಮತದಾನಕ್ಕೆ ಕೇವಲ ಒಂದು ದಿನ ಬಾಕಿಯಿರುವಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯ ದಿಗ್ಗಜರ ವಾಕ್ಸಮರದ ನಡುವೆಯೇ ನಗರದಲ್ಲಿ ಗೂಳಿಗಳ ಕಾದಾಟ ಗಮನ ಸೆಳೆಯಿತು.

Advertisement

ಇದನ್ನು ನೋಡಲು ನೆರೆದಿದ್ದವರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭಿಮಾನಿಗಳು ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಕಾಳಗವೆಂದು ಮಾತನಾಡಿಕೊಳ್ಳುತ್ತಿದ್ದರು.

15 ನಿಮಿಷಕ್ಕೂ ಅಧಿಕ ಕಾಲ ನಡೆದ ಗೂಳಿಗಳ ಕಾದಾಟದಲ್ಲಿ ವಾಹನಗಳು ಅಡ್ಡಿಪಡಿಸಿದರೂ, ಸ್ಥಳೀಯರು ನೀರು ಎರಚಿದರೂ ಕಾಳಗ ಮುಂದಯವರಿದಿತ್ತು.

ಗೂಳಿಗಳ ಕಾಳಗದ ನಡುವೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪಾದಚಾರಿಗಳು, ಬೈಕ್ ಸವಾರರು ಹಾಗೂ ರಸ್ತೆಯ ಅಕ್ಕಪಕ್ಕದ ಅಂಗಡಿಯವರು ಭಯಭೀತರಾಗಿದ್ದರು. ಕೆಲವರಂತು ರಾಜಕೀಯ ಪಕ್ಷಗಳ ನಾಯಕರ ಗುದ್ದಾಟದಂತೆ ಬಿಂಬಿಸುತ್ತಿದ್ದರು.

ಒಟ್ಟಿನಲ್ಲಿ ಗೂಳಿಗಳ ಕಾಳಗ ಭಯವನ್ನು ಸೃಷ್ಟಿಸಿ, ಆತಂಕವನ್ನುಂಟು ಮಾಡುವುದುರ ಜೊತೆಗೆ ಮನರಂಜನೆಗೂ ಸಾಕ್ಷಿಯಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next