Advertisement

BSY ಆವತ್ತೇ ನನ್ನನ್ನು ಮುಗಿಸಲು ಪ್ಲ್ಯಾನ್‌ ಮಾಡಿದ್ದರು; ಸಿಎಂ

11:21 AM Oct 30, 2018 | |

ಶಿವಮೊಗ್ಗ : ಯಡಿಯೂರಪ್ಪ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಜೆಡಿಎಸ್‌-ಬಿಜೆಪಿ ಮೈತ್ರಿ ಸರಕಾರವಿದ್ದಾಗಲೇ ಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ಧಾಳಿ  ನಡೆಸಿದ್ದಾರೆ. 

Advertisement

ಮಂಗಳವಾರ ಶಿವಮೊಗ್ಗಕ್ಕೆ  ಸುದ್ದಿಗೋಷ್ಠಿ ನಡೆಸಿದ ಸಿಎಂ ‘ಆವತ್ತು ನಾನು ಗಣಿ ಮಾಲೀಕರ ಬಳಿ  150 ಕೋಟಿ ಹಣ ಪಡೆದಿದ್ದೆ ಎಂದು ನನ್ನ ಸಂಪುಟದಲ್ಲಿ ಇದ್ದ ಬಳ್ಳಾರಿಯ ವಿಧಾನ ಪರಿಷತ್‌ ಸದಸ್ಯರೊಬ್ಬರು ಆರೋಪ ಮಾಡಿದ್ದರಲ್ಲಾ , ಯಡಿಯೂರಪ್ಪನವರೆ ಅದರ ಬಗ್ಗೆ ಚರ್ಚೆ ಮಾಡಿದ್ದೀರಾ ? ನನಗೆ ರಕ್ಷಣೆ ಗೊಡಲು ಬಂದಿರಾ’ ಎಂದು ಪ್ರಶ್ನಿಸಿದರು. 

‘ಇಪ್ಪತ್ತು-ಇಪ್ಪತ್ತು ಒಡಂಬಡಿಕೆ ಮಾಡಿಕೊಂಡ ವೇಳೆ ಮೋಸ ಮಾಡಿದ್ದೇನೆ ಎನ್ನುತ್ತೀರಲ್ಲಾ,ಆವತ್ತೇ ನೀವು ನನ್ನನ್ನು ಮುಗಿಸಲು ಯೋಜನೆ ಮಾಡಿದ್ದೀರಲ್ಲಾ’ ಎಂದರು. 

‘ನನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ನನ್ನದೇ ಸಂಪುಟದಲ್ಲಿದ್ದ ಬಿಜೆಪಿ ನಾಯಕರು (ಬಿ.ಶ್ರೀರಾಮುಲು) ಆರೋಪ ಮಾಡಿದ್ದರಲ್ಲಾ, ಆವಾಗ ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆಯುವಾಗ ಯಡಿಯೂರಪ್ಪ ಎಲ್ಲಿ ಕುಳಿತಿದ್ದರು, ಆ ಬಗ್ಗೆ ಏನಾದರು ಚರ್ಚೆ ನಡೆಸಿದ್ದರಾ’ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next