Advertisement

ಫಲಿತಾಂಶಕ್ಕಿಂತ ಮುಂಚೆಯೇ ಗೆದ್ದ ಕಾಗವಾಡ ಬಿಜೆಪಿ ಅಭ್ಯರ್ಥಿ: ಸಿಎಂ ಬಿಎಸ್ ವೈ

09:50 AM Nov 24, 2019 | keerthan |

ಬೆಳಗಾವಿ: ಕಾಗವಾಡ ಅಭ್ಯರ್ಥಿ ಶ್ರೀಮಂತ ಪಾಟೀಲ ಗೆಲುವು ಸಾಧಿಸಿದ್ದಾಗಿದೆ.‌ ಇನ್ನೇನಿದ್ದರೂ ಮತಗಳ ಅಂತರ ಮಾತ್ರ ನೋಡಬೇಕಿದೆ.‌ ಅಥಣಿ ಸೇರಿದಂತೆ ರಾಜ್ಯದ ಯಾವ ಕ್ಷೇತ್ರಗಳಲ್ಲೂ ಭಿನ್ನಮತ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ‌ಯಡಿಯೂರಪ್ಪ ಹೇಳಿದರು.

Advertisement

ಅಥಣಿ ತಾಲೂಕಿನ ಶಿರಗುಪ್ಪಿಯಲ್ಲಿ ಶನಿವಾರ ಬಿಜೆಪಿ ಸಮಾವೇಶಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲ ಮುಖಂಡರು ಒಟ್ಟಾಗಿ ಅಭ್ಯರ್ಥಿಗಳ ಗೆಲುವಿಗೆ ದುಡಿಯಲಿದ್ದಾರೆ. ಇದು ಈಗಾಗಲೇ ಅಥಣಿಯಲ್ಲಿ ನಡೆದ ಸಮಾವೇಶದಲ್ಲಿ ಸಾಬೀತಾಗಿದೆ ಎಂದರು

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಸುಭದ್ರ ಸರ್ಕಾರವನ್ನು ಜನರು ಬಯಸಿದಂತೆ ಆಗಿದೆ ಎಂದು ಬಿಎಸ್ ವೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next