Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಮ್ಸ್ನಲ್ಲಿ ಅವ್ಯವಹಾರ ನಡೆದಿದ್ದು ಮೇಲ್ನೋಟಕ್ಕೆ ಸಾಬೀತಾದರು ಸಹ ಕ್ರಮ ವಹಿಸದಿರುವುದು ಬೇಸರದ ಸಂಗತಿ. ಬ್ರಿಮ್ಸ್ಗೆ ಭೇಟಿ ನೀಡಿ ಅವ್ಯವಹಾರ ಕುರಿತು ಸುದೀರ್ಘವಾಗಿ ಚರ್ಚಿಸಿ, ಸಂಬಂಧಿಸಿದರಿಂದ ಹೇಳಿಕೆ ಪಡೆಯಲಾಗಿದೆ. ಈ ವಿಷಯ ಸಂಬಂಧ ಬೆಂಗಳೂರಿನಲ್ಲಿ ಮುಂದಿನ ವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚೆನಡೆಸಲಾಗುವುದು ಎಂದರು.
ಅವರು ವಿಧಾನಸಭೆಯಲ್ಲಿ ಪ್ರಶ್ನೆಗೆ ಅಂದಿನ ವೈದ್ಯಕೀಯ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ವರದಿಗಳು ಅವ್ಯವಹಾರ ನಡೆದಿರುವುದನ್ನು ಪತ್ತೆ ಹಚ್ಚಿ ವರದಿ ನೀಡಿದ್ದವು. ಇಲ್ಲಿ ಬಹಳಷ್ಟು ನ್ಯೂನತೆಗಳು
ಮೇಲ್ನೋಟಕ್ಕೆ ಕಂಡು ಬಂದಿದ್ದು, ಆರೋಪಿಗಳನ್ನು ರಕ್ಷಿಸುವ ಕೆಲಸಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
Related Articles
ಹಿಂದಿನ ಸಿಇಒ ಡಾ| ಆನಂದಸಾಗರ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಎರಡು ಪ್ರತ್ಯೇಕ ಸಮಿತಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ವರದಿ ನೀಡಿದ್ದರು. ಇದರಲ್ಲಿ ಪ್ರಕಾಶ ಮಡಿವಾಳ, ಪ್ರಕಾಶ ಮಾಳಗೆ ಹಾಗೂ ವರ್ಷಾ ಅವರು ಇನ್ನೂ ಬ್ರಿಮ್ಸ್ನಲ್ಲಿಯೇ ಮುಂದುವರೆದಿದ್ದಾರೆ.
Advertisement
ಸಮಿತಿ ಸದಸ್ಯರಾದ ಡಾ| ಕೆ. ಶ್ರೀನಿವಾಸಮೂರ್ತಿ, ಹರೀಶ್ ಪುಂಜ, ಸೋಮನಗೌಡ ಪಾಟೀಲ, ಸಂಜು ಮಠಂದೂರ, ದತ್ತಾತ್ರೇಯ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.