Advertisement

ಸೇತುವೆ ಕುಸಿತ: ಜಾಗೃತಿ ಫಲಕ ಅಳವಡಿಕೆ

02:01 PM May 19, 2018 | |

ಸಾಲ್ಮರ: ಎಪಿಎಂಸಿ ರಸ್ತೆಯ ರೈಲ್ವೇ ಕ್ರಾಸ್‌ ಬಳಿ ಇರುವ ಸೇತುವೆ ಕುಸಿಯುವ ಭೀತಿಯಲ್ಲಿದೆ. ಈ ಅಪಾಯದ ಕುರಿತು ಸಾರ್ವಜನಿಕವಾಗಿ ಎಚ್ಚರಿಕೆ ನೀಡುವ ಬ್ಯಾನರ್‌ ಹಾಕಲಾಗಿದ್ದು, ಇಲಾಖೆಗಳು ಸಮಸ್ಯೆ ಪರಿಹರಿಸಲು ವಿಫ‌ಲರಾಗಿದ್ದಾರೆ ಎಂದು ಬ್ಯಾನರ್‌ ಮೂಲಕ ಜಾಗೃತಿ ಅಭಿಯಾನವನ್ನು ಕಲಿಯುಗ ಸೇವಾ ಸಮಿತಿ ನಡೆಸುತ್ತಿದೆ.

Advertisement

ಕುಸಿಯುವ ಭೀತಿಯಲ್ಲಿರುವ ಸೇತುವೆಯ ಕುರಿತು ಕಳೆದ ಹಲವಾರು ತಿಂಗಳಿನಿಂದ ಸಂಬಂಧಪಟ್ಟ ಇಲಾಖೆಗೆ ಕಲಿಯುಗ ಸೇವಾ ಸಮಿತಿ ದೂರು ನೀಡುತ್ತಿದೆ. ಆದರೆ ಇದಕ್ಕೆ ಯಾವುದೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇದೀಗ ಕುಸಿಯುವ ಭೀತಿಯಲ್ಲಿರುವ ಸೇತುವೆಯ ಬಳಿ ಅಪಾಯ ಇದೆ. ನಿಧಾನವಾಗಿ ಚಲಿಸಿ ಎಂದು ಬರೆಯಲಾಗಿದೆ. ಮಾತ್ರವಲ್ಲ, ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಸಮಸ್ಯೆಗಳನ್ನು ಜನಪ್ರತಿನಿಧಿಗಳಾಗಲಿ, ನಗರಸಭೆಯಾಗಲಿ, ಕಂದಾಯ ಉಪವಿಭಾಗ ಅಧಿಕಾರಿಗಳಾಗಲಿ ಪರಿಹರಿಸುವಲ್ಲಿ ವಿಫ‌ಲರಾಗಿದ್ದಾರೆ ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next