Advertisement

ಮದುವೆಗೆ 3 ತಾಸು ಮನ್ನ ಹೃದಯಾಘಾತದಿಂದ ಮದುಮಗ ಸಾವು 

01:28 PM Aug 13, 2017 | |

ಸಾಂಗ್ಲಿ: ಮದುವೆಯ ಅಕ್ಷತೆ ಕಾಳುಗಳು ಬೀಳಲು ಕೇವಲ ಮೂರು ತಾಸು ಬಾಕಿ. ಅಷ್ಟರಲ್ಲೆ ಹಸೆಮಣೆ ಏರಬೇಕಿದ್ದ ಮದುಮಗ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಮೀರಜ್‌ ನಗರದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ರವೀಂದ್ರ ಮದನ್‌ ಪೀಸೆ (27) ಮೃತಪಟ್ಟ ಮದುಮಗ.

Advertisement

ಮೀರಜ್‌ ನಗರದ ರವೀಂದ್ರ ಅವರ ವಿವಾಹವನ್ನು ಕೊಲ್ಲಪುರ ಜಿಲ್ಲೆಯ ಕಸ್ಬಾಬಾವ್‌ಡಾ ನಗರದ ಭೂಷಣ್‌ ದಿಗಂಬರ್‌ ಕುಡಾಳ್ಕರ್‌ ಅವರ ಹಿರಿಯ ಪುತ್ರಿ ವೃಷಾಲಿಯೊಂದಿಗೆ ಕೆಲ ತಿಂಗಳ ಹಿಂದೆ ನಿಶ್ಚಯಿಸಲಾಗಿತ್ತು. ವಿವಾಹ ಜರಗುವ ಸಮಯದ ನಿಗದಿಯಂತೆ ಶುಕ್ರವಾರ ಸಂಜೆ ವಧು-ವರನಿಗೆ ಅರಸೀನ ಹಚ್ಚುವ ಕಾರ್ಯಕ್ರಮ ಮುಗಿಯಿತು. ಮೀರಜ್‌ ನಗರದಲ್ಲಿರುವ ಶಾಹಿ ದರ್ಬಾರ್‌ ಮಂಗಲ ಕಾರ್ಯಾಲಯದಲ್ಲಿ ಶನಿವಾರ 11.45 ರ ವಿವಾಹ ಮೂಹೂರ್ತಕ್ಕೆ ಮದುವೆ ನಡೆಯಬೇಕಿತ್ತು. ಬೆಳಗ್ಗೆ 8.30 ಕ್ಕೆ ರವೀಂದ್ರ ಮದುಮಗನ ವೇಷಭೂಷಣ ಧರಿಸಿ ತಯಾರಾಗಿ ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಂಗಲ ಕಾರ್ಯಾಲಯ ಕಡೆಗೆ ಬರುತ್ತಿರುವಾಗ ಮಾರ್ಗ ಮಧ್ಯೆ ಎದೆ ನೋವಿಗೊಳಗಾಗಿ ನೆಲದ ಮೇಲೆ ಕುಸಿದು  ಬಿದ್ದರು. ಚಿಕಿತ್ಸೆಗಾಗಿ ತತ್‌ಕ್ಷಣವೇ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರು. ತಪಾಸಣೆ ಮಾಡಿದ ವೈದ್ಯರು ರವೀಂದ್ರ ಹೃದಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ರವೀಂದ್ರ ಅವರ ಸಾವಿನ ಸುದ್ದಿ ತಿಳಿಯುತ್ತಿದಂತೆ ಶಾಹಿ ದರ್ಬಾರ್‌ ಮಂಗಲ ಕಾರ್ಯಾಲಯದಲ್ಲಿ ದುಃಖದ ಅಕ್ರಂದನ ಕೇಳಿ ಬರುತ್ತಿತ್ತು. ಈ ಘಟನೆಯಿಂದಾಗಿ ವರ ಮತ್ತು ವಧುವಿನ ಕುಟುಂಬ ಸದಸ್ಯರಿಗೆ ಮತ್ತು ಸಂಬಂಧಿಕರಿಗೆ ತೀವ್ರ ಮಾನಸಿಕ ಧಕ್ಕೆ ಉಂಟಾಗಿದ್ದು ಮದುವೆ ಮಂಟಪ ಹಾಗೂ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next