Advertisement

ಉಂಡಾರು ದೇವಸ್ಥಾನದಲ್ಲಿ  ಬ್ರಹ್ಮಕಲಶ ಸಂಪನ್ನ

12:31 PM Apr 24, 2018 | Harsha Rao |

ಕಾಪು: ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವೀ ಕೃತ ದೇವಾಲಯ ಸಮರ್ಪಣೆ, ಬಿಂಬ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.

Advertisement

ಉಂಡಾರು ದೇಗುಲದ ಆಡಳಿತದಾರ ಉಡುಪಿ ಸೋದೆ ಮಠಾಧೀಶ  ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ವೇ| ಮೂ| ಪುತ್ತೂರು ಮಧುಸೂದನ ತಂತ್ರಿ, ಅವಧಾನಿ ಸುಬ್ರಹ್ಮಣ್ಯ ಭಟ್‌ ಅವರ ನೇತೃತ್ವದಲ್ಲಿ, ಸೋದೆ ಮಠದ ದಿವಾನ ಶ್ರೀನಿವಾಸ ತಂತ್ರಿ ಅವರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಗಣಪತಿ ಯಾಗ, ಬೃಹತೀ ಸಹಸ್ರ ನಾಮ ಹೋಮ, ವಿಶೇಷ ಶಾಂತಿ ಹೋಮ, ಶ್ರೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ ನಡೆಯಿತು. ಬಳಿಕ ನ್ಯಾಸ ಪೂಜೆ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮತ್ತು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಡಾ| ರಮೇಶ್‌ ಮಿತ್ತಂತಾಯ, ನವೀನ್‌ ಅಮೀನ್‌ ಶಂಕರಪುರ, ಚಂದ್ರಹಾಸ ಶೆಟ್ಟಿ, ಲೀಲಾಧರ ಶೆಟ್ಟಿ, ಅರುಣ್‌ ಶೆಟ್ಟಿ ಪಾದೂರು, ಉದಯ್‌ ಜಿ., ಕಾರ್ಯದರ್ಶಿ ನಂದನ್‌ ಕುಮಾರ್‌, ಕೋಶಾಧಿಕಾರಿ ವಿ. ಜಿ. ಶೆಟ್ಟಿ, ಮುಂಬಯಿ ಸಮಿತಿ ಗೌರವಾಧ್ಯಕ್ಷ ಸುಂದರ್‌ ಶೆಟ್ಟಿ, ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ ಗುರುಸ್ವಾಮಿ, ಕೋಶಾಧಿಕಾರಿ ಶಶಿಧರ್‌ ಶೆಟ್ಟಿ, ಪದಾಧಿಕಾರಿಗಳಾದ ದಯಾ ನಂದ ಶೆಟ್ಟಿ, ರವಿ ವರ್ಮ ಶೆಟ್ಟಿ, ಉದಯ್‌ ಶೆಟ್ಟಿ, ಡಾ| ಶ್ರೀನಿವಾಸ ಭಟ್‌, ಲಕ್ಷ್ಮಣ್‌ ಶೆಟ್ಟಿ  ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next