Advertisement

ಪ್ರೇಯಸಿಗಾಗಿ 65 ಲಕ್ಷ ಕಳವು

01:04 PM Feb 10, 2021 | Team Udayavani |

ಬೆಂಗಳೂರು: ಇತ್ತೀಚೆಗಷ್ಟೇ ಸುಬ್ರಹ್ಮಣ್ಯನಗರದಲ್ಲಿ ಎಟಿಎಂ ಕೇಂದ್ರಕ್ಕೆ ಹಣ ತುಂಬುವ ವಾಹನದ ಚಾಲಕನೇ ಹಣವಿರುವ ಬ್ಯಾಗ್‌ಗಳನ್ನು ಹೊತ್ತೂಯ್ದ ಪ್ರಕರಣ ಮತ್ತೂಂದು ತಿರುವು ಪಡೆದುಕೊಂಡಿದ್ದು, ಪ್ರೇಯಸಿ ಜತೆ ಹೊಸ ಜೀವನ ಆರಂಭಿಸಲು ಈ ಕೃತ್ಯ ಎಸಗಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯವಾಗಿದೆ.

Advertisement

ಒಂದು ವಾರದಿಂದ ತಲೆಮರೆಸಿಕೊಂಡಿರುವ ಹಾಸನ ಮೂಲದ ಯೋಗೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಯೋಗೇಶ್‌ ನಗರದ ಸೆಕ್ಯೂರ್‌ ವ್ಯಾಲ್ಯೂ ಕಂಪನಿಯಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಏಳು ದಿನಗಳ ಹಿಂದೆಸುಬ್ರಹ್ಮಣ್ಯನಗರದಲ್ಲಿರುವ ಖಾಸಗಿ ಬ್ಯಾಂಕ್‌ನಎಟಿಎಂ ಕೇಂದ್ರಕ್ಕೆ ಹಣ ತುಂಬಲು ಗನ್‌ ಮ್ಯಾನ್‌ ಮತ್ತು ಮ್ಯಾನೆಜರ್‌ ಜತೆ ಹೋಗಿದ್ದ. ಈ ವೇಳೆ ಗನ್‌ಮ್ಯಾನ್‌ ಮತ್ತು ಮ್ಯಾನೆಜರ್‌ ಎಟಿಎಂ ಕೇಂದ್ರಕ್ಕೆ ಹಣತುಂಬಲು ಒಳಗೆ ಹೋಗಿದ್ದರು. ಆಗ ಆರೋಪಿ ವಾಹ  ನದಲ್ಲಿದ್ದ ಸುಮಾರು 65 ಲಕ್ಷ ರೂ. ಅನ್ನು ಬ್ಯಾಗ್‌ವೊಂದರಲ್ಲಿ ತುಂಬಿಕೊಂಡು ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಇಬ್ಬರು ಸಿಬ್ಬಂದಿ ವಾಹನದ ಬಳಿ ಬಂದಾಗ ಆರೋಪಿ ಮತ್ತು ಹಣವಿದ್ದ ಬ್ಯಾಗ್‌ಗಳು ನಾಪತ್ತೆಯಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : ಕೆಂಪುಕೋಟೆ ಹಿಂಸಾಚಾರ ಕೇಸ್; ಮತ್ತೊಬ್ಬ ಮೋಸ್ಟ್ ವಾಂಟೆಡ್ ಇಕ್ಬಾಲ್ ಸಿಂಗ್ ಬಂಧನ

ಅತ್ತೆ ಮಗಳಿಗಾಗಿ ಪರಾರಿ?: ಯೋಗೇಶ್‌ಗೆ ಈಗಾಗಲೇ ಮದುವೆಯಾಗಿದ್ದು, ನಂದಿನಿ ಲೇಔಟ್‌ನಲ್ಲಿ ವಾಸವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೂ ಯೋಗೇಶ್‌ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಮತ್ತೂಂದೆಡೆ ಆತನ ಅತ್ತೆ ಮಗಳು ಕೂಡ ಪತಿಯಿಂದ ದೂರವಾಗಿದ್ದರು ಎನ್ನಲಾಗಿದೆ. ಹೀಗಾಗಿ 65 ಲಕ್ಷ ರೂ. ಕದ್ದು ಆಟೋದಲ್ಲಿ ಪರಾರಿಯಾದ ಯೋಗೇಶ್‌, ನೇರವಾಗಿ ಅತ್ತೆ ಮಗಳನ್ನು ಕರೆದುಕೊಂಡು ಉತ್ತರ ಭಾರತದ ಕಡೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಯೋಗೇಶ್‌ ಮತ್ತು ಆತನ ಪ್ರೇಯಸಿಯ ಮೊಬೈಲ್‌ ಕೂಡ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next