Advertisement

ಕೊಳವೆ ಬಾವಿ ವಿಫಲ: ತಂದೆ, ಮಗ ಆತ್ಮಹತ್ಯೆ

10:09 AM Apr 17, 2017 | Karthik A |

ತರೀಕೆರೆ: ಮಗ ಆತ್ಮಹತ್ಯೆ ಮಾಡಿಕೊಂಡ ದುಃಖ ತಡೆಯಲಾರದೆ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ಗುಳ್ಳದಮನೆ ಗ್ರಾಮದಲ್ಲಿ  ರವಿವಾರ ಸಂಭವಿಸಿದೆ. 3 ಕೊಳವೆಬಾವಿಗಳು ವಿಫಲಗೊಂಡಿದ್ದೇ ಇವರಿಬ್ಬರ ಆತ್ಮಹತ್ಯೆಗೆ ಕಾರಣವಾಗಿದೆ. ಶನಿವಾರ ಯೋಗಿಶ್‌ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಆಘಾತಕ್ಕೊಳಗಾದ ಅವನ ತಂದೆ ಶ್ರೀನಿವಾಸ್‌ (46) ಕೂಡ ರವಿವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗ ಯೋಗಿಶ್‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ಶ್ರೀನಿವಾಸ್‌ ಶಿವಮೊಗ್ಗದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next