Advertisement

ಬೊರಿವಲಿ ಸಾವರ್‌ಪಾಡಾ ಶ್ರೀ ಶನಿಮಂದಿರ: ನಾಗರ ಪಂಚಮಿ

01:40 PM Aug 21, 2021 | Team Udayavani |

ಬೊರಿವಲಿ: ಬೊರಿವಲಿ ಪೂರ್ವದ ಸಾವರ್‌ಪಾಡಾ ಶ್ರೀ ಶನಿಮಹಾತ್ಮಾ ಪೂಜಾ ಮಿತ್ರ ಮಂಡಳಿಯ ಸಂಚಾಲಕತ್ವದ ಶ್ರೀ ಶನಿಮಂದಿರದಲ್ಲಿ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪ್ರಧಾನ ಅರ್ಚಕ ವಿಜಯ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಂದಿರದ ಪ್ರಧಾನ ದೇವರಾದ ಶನೀಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ನಾಗರ ಪಂಚಮಿ ಪ್ರಯುಕ್ತ ನಾಗದೇವರ ಸನ್ನಿಧಾನದಲ್ಲಿ ನಾಗದೇವರಿಗೆ ತನು ತಂಬಿಲ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಿತು. ಪರಿಸರದ ಅನೇಕ ಭಕ್ತರು ಈ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಕೊರೊನಾ ಮರ್ಗಸೂಚಿಗಳಿಗೆ ಅನುಗುಣವಾಗಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಇದನ್ನೂ ಓದಿ:ಅಫ್ಘಾನಿಸ್ತಾನ್ ಬಿಕ್ಕಟ್ಟು: ಕಾಬೂಲ್ ನಿಂದ 85ಕ್ಕೂ ಅಧಿಕ ಭಾರತೀಯರ ಏರ್ ಲಿಫ್ಟ್

ಮಂಡಳಿಯ ಅಧ್ಯಕ್ಷ ಗೋವರ್ಧನ ಸುವರ್ಣ, ಉಪಾಧ್ಯಕ್ಷ ಗಿರೀಶ್‌ ಕರ್ಕೇರ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ಗಿರಿಧರ್‌ ಸುವರ್ಣ, ಕೋಶಾಧಿಕಾರಿ ಕೇಶವ ಕಾಂಚನ್‌, ಜತೆ ಕೋಶಾಧಿಕಾರಿ ಸುಧಾಕರ್‌ ಸನಿಲ್‌, ಸಮಿತಿಯ ನಾಗೇಶ್‌ ಕರ್ಕೇರ, ರಘುನಾಥ್‌ ಸಾಲ್ಯಾನ್‌, ದಾಮೋದರ ಪುತ್ರನ್‌, ಸದಸ್ಯರಾದ ಗೋಪಾಲ್‌ ಪುತ್ರನ್‌, ವಿನೋದ್‌ ಸಾಲ್ಯಾನ್‌, ದೇವೇಂದ್ರ ಸುರತ್ಕಲ್‌, ಯಶ್‌ ಶೆಟ್ಟಿ, ರಾಜೇಶ್ವರಿ ಸುವರ್ಣ ಹಾಗೂ ಸ್ಥಳೀಯ ಭಕ್ತರು ಉಪಸ್ಥಿತರಿದ್ದರು. ಪುರುಷೋತ್ತಮ ಮಂಚಿ, ಗಿರೀಶ್‌ ಕರ್ಕೇರ ಅವರು ನಾಗದೇವರ ಮಂಟವನ್ನು ಅಲಂಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next