Advertisement

ಜಿ. ವಿ ಅಯ್ಯರ್‌ ಪುತ್ರನ ಭೂ ನಾಟಕ ಮಂಡಳಿ 

11:33 AM Sep 07, 2022 | Team Udayavani |

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜಿ. ವಿ ಅಯ್ಯರ್‌ ಅವರ ಪುತ್ರ ಜಿ. ವಿ ರಾಘವೇಂದ್ರ ಅಯ್ಯರ್‌, “ಜಿ. ವಿ ಅಯ್ಯರ್‌ ಪ್ರೂಡಕ್ಷನ್ಸ್‌’ ಬ್ಯಾನರ್‌ನಲ್ಲಿ “ಭೂ ನಾಟಕ ಮಂಡಳಿ’ ಎಂಬ ಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶಿಸಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು.

Advertisement

ಮಾ. ತುಷಾರ್‌, ಸ್ಪರ್ಶ ರೇಖಾ, ರಾಜೇಶ್‌ ಕೃಷ್ಣನ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್‌ ಬಿಡುಗಡೆ ವೇಳೆ ಮಾತನಾಡಿದ ನಿರ್ಮಾಪಕ, ನಿರ್ದೇಶಕ ರಾಘವೇಂದ್ರ ಅಯ್ಯರ್‌, “2017ರಲ್ಲಿ ನಮ್ಮ ತಂದೆಯವರ ನೂರನೇ ಜನ್ಮದಿನದ ನೆನಪಿಗಾಗಿ ಈ ಸಿನಿಮಾ ಆರಂಭಿಸಿದೆವು.

ಸಿನಿಮಾ ಬಿಡುಗಡೆ ಮಾಡಬೇಕೆನ್ನುವ ವೇಳೆಗೆ ಕೊರೋನಾ ಬಂದು 2 ವರ್ಷ ಮುಂದೆ ಹೋಯಿತು. ಇದು ನೈಜಘಟನೆ ಆಧಾರಿತ ಸಿನಿಮಾವಾಗಿದ್ದು, ಮಕ್ಕಳ ಎದುರೇ ತಪ್ಪು ಮಾಡುವವರಿಗೆ, ಮಕ್ಕಳಿಂದಲೇ ಸಂದೇಶ ಹೇಳುವ ಪ್ರಯತ್ನ ಮಾಡಲಾಗಿದೆ. ತಂದೆ ತಾಯಿಗಳಿಗೆ ಅವರ ಸಿನಿಮಾ ಆಗಿ ಕಂಡರೆ, ಮಕ್ಕಳಿಗೆ ಮಕ್ಕಳ ಸಿನಿಮಾ ಥರಾನೇ ಕಾಣಿಸುತ್ತದೆ’ ಎಂದು ಹೇಳಿದರು.

ಇನ್ನು “ವೃದ್ಧಾಶ್ರಮದ ಬಗ್ಗೆಯೂ ಈ ಸಿನಿಮಾದಲ್ಲಿ ವಿವರಣೆಯಿದ್ದು, ಪೋಷಕರ ಒತ್ತಡದಿಂದ ಮಕ್ಕಳು ಹೇಗೆ ಗಟ್ಟಿ ನಿರ್ಧಾರ ತೆಗೆದುಕೊಳ್ತಾರೆ ಎಂಬುದನ್ನು ತೆರೆಮೇಲೆ ಹೇಳಲಾಗಿದೆ. ಇದೇ ಸೆ. 23ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ’ ಎಂದಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next