Advertisement

Gadchiroli: ದೋಣಿ ಮಗುಚಿ ಆರು ಮಹಿಳೆಯರು ನೀರು ಪಾಲು; ಒಬ್ಬಾಕೆಯ ರಕ್ಷಣೆ

03:53 PM Jan 23, 2024 | |

ಮುಂಬೈ: ದೋಣಿಯೊಂದು ಮಗುಚಿ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿ, ಐದು ಮಂದಿ ನಾಪತ್ತೆಯಾದ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

Advertisement

ಚಮೋರ್ಶಿ ಪೊಲೀಸರ ಪ್ರಕಾರ, ಮೆಣಸಿನಕಾಯಿ ಕತ್ತರಿಸಲು ಏಳು ಮಹಿಳೆಯರು ಚಮೋರ್ಶಿಯ ಘನಪುರ ಘಾಟ್ ಬಳಿ ವನಗಂಗಾ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ದೋಣಿ ಮಗುಚಿ ಬಿದ್ದಿದೆ. ದೋಣಿ ನಡೆಸುತ್ತಿದ್ದವರು ದಡಕ್ಕೆ ಈಜಲು ಯಶಸ್ವಿಯಾದರು, ಆದರೆ ಮಹಿಳೆಯರು ನೀರಿನಲ್ಲಿ ಮುಳುಗಿದ್ದಾರೆ.

ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಸ್ಥಳೀಯ ಈಜುಗಾರರ ಸಹಾಯದಿಂದ ರಕ್ಷಣಾ ತಂಡವು ಉಳಿದ ಮಹಿಳೆಯರ ರಕ್ಷಣೆಗೆ ಪ್ರಯತ್ನ ಪಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next