Advertisement

ಪೇಜಾವರ ವಿಶ್ವೇಶತೀರ್ಥ ಮೇಲ್ಸೇತುವೆ ಬೋರ್ಡ್‌ ಅಳವಡಿಕೆ

08:03 PM Jun 08, 2020 | Sriram |

ಉಡುಪಿ: ಮಂಗಳೂರು -ಕುಂದಾಪುರ ರಾಷ್ಟ್ರೀಯ ಹೆದ್ದಾರಿ -66ರ ಮಾರ್ಗದ ಕರಾವಳಿ ಬೈಪಾಸ್‌ ಮೇಲ್ಸೇತುವೆ ಯಲ್ಲಿ “ಪೇಜಾವರ ವಿಶ್ವೇಶ ತೀರ್ಥ ಮೇಲ್ಸೇತುವೆ” ಎಂಬ ಹೆಸರಿನ ಬೋರ್ಡನ್ನು ಶನಿವಾರ ಆಳವಡಿಸಲಾಗಿದೆ. ಇದನ್ನು ಯಾರು ಹಾಕಿದ್ದಾರೆಂದು ತಿಳಿದುಬಂದಿಲ್ಲ.

Advertisement

ಮಂಗಳೂರು ಮತ್ತು ಬೆಂಗಳೂರಿನಲ್ಲಿನ ಮೇಲ್ಸೇತುವೆಗಳ ವಿವಾದದ ಬಳಿಕ ರಾಜ್ಯದ ಕೆಲವೆಡೆ ಇಂತಹ‌ ಬೆಳವಣಿಗೆಗಳು ಕಂಡು ಬಂದಿದ್ದು, ಅದೇ ರೀತಿ ಇದೀಗ ಉಡುಪಿಯ ಮೇಲ್ಸೇತುವೆಯ ಡಿವೈಡರ್‌ ಮಧ್ಯೆ “ಪೇಜಾವರ ವಿಶ್ವೇಶತೀರ್ಥ ಮೇಲ್ಸೇತುವೆ” ಎಂಬ ಫ್ಲೆಕ್ಸ್‌ನಲ್ಲಿ ಬರೆದ ಬೋರ್ಡ್‌ ಹಾಕಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬೋರ್ಡ್‌ ಆಳವಡಿಕೆ ವಿಚಾರ ತಿಳಿದು ಬಂದಿದೆ. ಆದರೆ ಇದರ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರದ್ದಾ ಗಿರುವುದರಿಂದ ಅವರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಸದ್ಯ ಅದೇ ಬೋರ್ಡ್‌ ಸ್ಥಳ ದಲ್ಲೇ ಇದೆ ಎಂದು ಗೊತ್ತಾಗಿದೆ’ ಎಂದು ಉಡುಪಿ ನಗರ ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next