Advertisement

Himachal Pradesh: ದಿಬ್ಬಣಕ್ಕೆ ಮಳೆ ಅಡ್ಡಿ; ವಿಡಿಯೋ ಕಾಲ್‌ ಮೂಲಕವೇ ನೆರವೇರಿತು ವಿವಾಹ

12:01 PM Jul 12, 2023 | Team Udayavani |

ಶಿಮ್ಲಾ: ಕಳೆದ ಕೆಲ ದಿನಗಳಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಹಲವೆಡೆ ಭಾರೀ ಮಳೆ ಆಗುತ್ತಿದೆ. ಮಳೆಯ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ಜನ ಹೊರಗೆ ಹೋಗುವುದಕ್ಕೂ ಪ್ರವಾಹ ಭೀತಿ ಎದುರುರಾಗಿದೆ.

Advertisement

ಈ ಮಳೆಯ ನಡುವೆ ಆಶಿಶ್ ಸಿಂಘಾ ಹಾಗೂ ಶಿವಾನಿ ಠಾಕೂರ್ ವಿವಾಹ ಕಾರ್ಯಕ್ರಮ ವಿಶಿಷ್ಟವಾಗಿ ನೆರವೇರಿದೆ.

ಸೋಮವಾರ (ಜು.10 ರಂದು) ಕುಲುವಿನ ಭುಂಟರ್‌ನಲ್ಲಿ ಶಿವಾನಿ ಠಾಕೂರ್ ಅವರನ್ನು ಮದುವೆಯಾಗಲು ಶಿಮ್ಲಾದ ಕೋಟ್‌ಗಢದಿಂದ ಆಶಿಶ್ ಸಿಂಘಾ ತನ್ನ ‘ಬಾರಾತ್’ ( ದಿಬ್ಬಣದೊಂದಿಗೆ) ತೆರಳಬೇಕಿತ್ತು. ಆದರೆ ಮುಹೂರ್ತದ ಸಮಯ ಮೀರಿದರೂ ಮಳೆ ಮಾತ್ರ ನಿಲ್ಲದೇ ಸುರಿಯುತ್ತಿತ್ತು. ಹೇಗಾದರೂ ಮಾಡಿ ಮದುವೆ ಕಾರ್ಯಕ್ರಮ ನೆರವೇರಸಿಬೇಕೆನ್ನುವ ನಿಟ್ಟಿನಲ್ಲಿ ವಧು – ವರರ ಕುಟುಂಬಸ್ಥರು ವಿಶಿಷ್ಟವಾದ ವಿಧಾನವಾನ್ನು ಅನುರಿಸಿ ವಿವಾಹವನ್ನು ಮಾಡಿಸಿದ್ದಾರೆ.

ರಸ್ತೆಗಳು ಬ್ಲಾಕ್‌ ಆಗಿರುವ ಕಾರಣ ಆಶಿಶ್ ಸಿಂಘಾ ಹಾಗೂ ಶಿವಾನಿ ಠಾಕೂರ್ ವಿವಾಹ ಆನ್ಲೈನ್‌ ನಲ್ಲಿ ವಿಡಿಯೋ ಕಾಲ್‌ ಮೂಲಕ ನೆರವೇರಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ವಧು – ವರರು ಕ್ಯಾಮರಾದ ಮುಂದೆ ಕೂತುಕೊಂಡಿದ್ದಾರೆ. ಈ ವೇಳೆ ಅತ್ತ ಕಡೆಯಿಂದ ವಿವಾಹದ ವಿಧಿವಿಧಾನಗಳು ನಡೆದು, ಮದುವೆಯನ್ನು ಮಾಡಿಸಲಾಗಿದೆ.

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದ ಕನಿಷ್ಠ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next