Advertisement

ದಕ್ಷಿಣ ಭಾರತೀಯರೊಂದಿಗೆ ನಾವಿಲ್ವೆ!;ಬಿಜೆಪಿ ನಾಯಕ ತರುಣ್‌ ವಿವಾದ 

04:39 PM Apr 07, 2017 | |

ಹೊಸದಿಲ್ಲಿ : ‘ಭಾರತೀಯರು ಎಂದಿಗೂ ಜನಾಂಗೀಯ ದ್ವೇಷಿಗಳಲ್ಲ, ಅವರು ದಕ್ಷಿಣ ಭಾರತೀಯರೊಂದಿಗೆ ಬದುಕುತ್ತಿಲ್ಲವೆ’ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕ ತರುಣ್‌ ವಿಜಯ್‌ ವಿವಾದಕ್ಕೆ ಗುರಿಯಾಗಿದ್ದಾರೆ.

Advertisement

ವಿದೇಶಿ ಮಾದ್ಯಮವೊಂದಕ್ಕೆ  ಆಫ್ರಿಕನ್‌ ವಿದ್ಯಾರ್ಥಿಗಳ ಮೇಲಿನ ದಾಳಿಯ ಕುರಿತಾಗಿ ಪ್ರತಿಕ್ರಿಯೆ ನೀಡುವ ವೇಳೆ ಈ ಹೇಳಿಕೆ ನೀಡಿದ್ದು, ‘ಭಾರತೀಯರು ಎಂದಿಗೂ ಜನಾಂಗೀಯ ದ್ವೇಷಿಗಳಲ್ಲ. ನಾವು ದಕ್ಷಿಣ ಭಾರತೀಯರೊಂದಿಗೆ ಬದುಕುತ್ತಿಲ್ಲವೆ. ಕರ್ನಾಟಕ, ಅಂಧ್ರ, ತಮಿಳುನಾಡು ಮತ್ತು ಕೇರಳದ ಜನರೊಂದಿಗೆ ನಾವಿದ್ದೇವೆ. ನಾವು ನಮ್ಮ ಸುತ್ತಲಿರುವ ಕಪ್ಪು  ವರ್ಣೀಯರೊಂದಿಗೆ ಬದುಕುತ್ತಿಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥವಿಸಿ ಕೊಂಡಿದ್ದಲ್ಲಿ  ಕ್ಷಮೆ ಯಾಚಿಸುತ್ತಿದ್ದೇನೆ’ ಎಂದು  ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next