Advertisement

Goa ರಾಜ್ಯಸಭಾ ಸ್ಥಾನಕ್ಕೆ ಸದಾನಂದ ಶೇಟ್ ತಾನಾವಡೆ ಅವಿರೋಧವಾಗಿ ಆಯ್ಕೆ

05:29 PM Jul 18, 2023 | Team Udayavani |

ಪಣಜಿ: ಗೋವಾದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನಾವಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಚುನಾವಣಾಧಿಕಾರಿ ನಮ್ರತಾ ಉಲ್ಮಾನ್ ಅವರು ಈ ಕುರಿತ ಚುನಾವಣಾ ವರದಿಯನ್ನು ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿದ್ದಾರೆ. ಸದಾನಂದ ತಾನಾವಡೆ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ಅವಿರೋಧವಾಗಿ ಘೋಷಿಸಲಾಯಿತು ಮತ್ತು ಮಂಗಳವಾರ ಅವರ ಸಂಸದೀಯ ಪ್ರಮಾಣಪತ್ರವನ್ನು (ಫಾರ್ಮ್ 24) ಹಸ್ತಾಂತರಿಸಿದರು.

ಸದಾನಂದ್ ಶೇಟ್ ತಾನವಡೆಯವರು ಬೆಳಗ್ಗೆ ತಮ್ಮ ಸಂಸದರ ಪ್ರಮಾಣ ಪತ್ರ (ನಮೂನೆ 24) ಹಸ್ತಾಂತರಿಸಿದರು. ಅವರ ಜೊತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಬಿಜೆಪಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸದಾನಂದ ತಾನಾವಡೆ ರವರನ್ನು ಅಭಿನಂದಿಸಲಾಯಿತು.

ಚುನಾವಣೆಗೆ ಸಹಕರಿಸಿದ ವಿರೋಧ ಪಕ್ಷಗಳು ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಧನ್ಯವಾದ ತಿಳಿಸಿದ್ದಾರೆ. ಪ್ರತಿಪಕ್ಷಗಳು ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡದೆ ಸದಾನಂದ ತಾನಾವಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಪಕ್ಷಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿಯಿಂದ ಸದಾನಂದ ಶೇಟ್ ತನವಡೆ ಅಧಿಕೃತ ಉಮೇದುವಾರಿಕೆಯನ್ನು ಘೋಷಿಸಲಾಯಿತು, ಅದೇ ದಿನ, ವಿರೋಧ ಪಕ್ಷಗಳು ಗೋವಾದಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಎಂದು ಘೋಷಿಸಿದವು. ಹೀಗಾಗಿ ತಾನವಡೆ ಅವಿರೋಧವಾಗಿ ಆಯ್ಕೆಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next