Advertisement

Walking ಮಾಡಿದರೆ ಬಿಜೆಪಿಯವರ ಆರೋಗ್ಯ ವೃದ್ಧಿ: ಡಾ| ಶರಣಪ್ರಕಾಶ್‌

12:02 AM Jul 29, 2024 | Team Udayavani |

ರಾಯಚೂರು: ಮುಡಾ ಸೈಟ್‌ ಹಂಚಿಕೆ ವಿಚಾರದಲ್ಲಿ ಬಿಜೆಪಿಯವರು ಪಾದಯಾತ್ರೆ ಹೆಸರಲ್ಲಿ ವಾಕಿಂಗ್‌ ಮಾಡಲು ಮುಂದಾಗಿದ್ದು, ಅದರಿಂದ ಅವರ ಆರೋಗ್ಯ ವೃದ್ಧಿಯಾಗಲಿದೆ ಎಂದು ಉಸ್ತುವಾರಿ ಸಚಿವ ಡಾ| ಶರಣ ಪ್ರಕಾಶ್‌ ಆರ್‌. ಪಾಟೀಲ್‌ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

Advertisement

ಮುಡಾ ಸೈಟ್‌ ಹಂಚಿಕೆಯಲ್ಲಿ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ. ಆದರೂ ಪಾದಯಾತ್ರೆ ಮಾಡುತ್ತೇವೆ ಎಂದರೆ ಏನು ಮಾಡಲಿಕ್ಕಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next