Advertisement

2019ರಲ್ಲಿ ಬಿಜೆಪಿ ನಿರ್ನಾಮ, ಎನ್‌ಆರ್‌ಸಿಗೆ ಅವಕಾಶ ಇಲ್ಲ: ಮಮತಾ

04:33 PM Aug 28, 2018 | udayavani editorial |

ಕೋಲ್ಕತ : 2019ರ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ ನಿರ್ನಾಮವಾಗುತ್ತದೆ ಎಂದು ಭವಿಷ್ಯ ನುಡಿದಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ತನ್ನ ರಾಜ್ಯದಲ್ಲಿ ಅಸ್ಸಾಂ ಎನ್‌ಆರ್‌ಸಿ ರೀತಿಯ ಪ್ರಕ್ರಿಯೆ ನಡೆಯಲು ತಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

Advertisement

“ಪಶ್ಚಿಮ ಬಂಗಾಲದಲ್ಲಿ ಎನ್‌ಆರ್‌ಸಿ ನಡೆಯುವುದಕ್ಕೆ ನಾವು ಬಿಡುವುದಿಲ್ಲ. ಬಿಜೆಪಿಯವರು ನಮಗೆ ಚ್ಯಾಲೆಂಜ್‌ ಹಾಕಿದ್ದಾರೆ. ನಮಗೆ ಚ್ಯಾಲೆಂಜ್‌ ಹಾಕಿದವರಿಗೆ ನಾವು ತಕ್ಕುದಾದ ಉತ್ತರವನ್ನೇ ನೀಡುತ್ತೇವೆ’ ಎಂದು ಮಮತಾ ಗುಡುಗಿದರು.

ರಾಜ್ಯದಲ್ಲಿ ಈಚೆಗೆ ನಡೆದ ಪಂಚಾಯತ್‌ ಚುನಾವಣೆಯನ್ನು ಉಲ್ಲೇಖೀಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿಯು ರಾಜ್ಯದಲ್ಲಿ ಹತ್ಯಾ ರಾಜಕಾರಣಕ್ಕೆ ಕೈಹಾಕುತ್ತಿದೆ ಎಂದು ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next