Advertisement

ತರೂರ್‌ ಹಿಂದಿ, ಹಿಂದು, ಹಿಂದುತ್ವ ಟ್ವೀಟ್‌: ರಾಹುಲ್‌ಗೆ BJPಎಚ್ಚರಿಕೆ

05:30 AM Feb 01, 2019 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಹಿಂದಿ, ಹಿಂದು, ಹಿಂದುತ್ವ ಕುರಿತಾಗಿ ಮಾಡಿರುವ ವಿವಾದಿತ ಟ್ವೀಟ್‌ ಅನುಸರಿಸಿ ಭಾರತೀಯ ಜನತಾ ಪಕ್ಷ ಇಂದು ಶುಕ್ರವಾರ “ದೇಶದ ಅತ್ಯಂತ ಹಳೇ ಪಕ್ಷವಾಗಿರುವ ಕಾಂಗ್ರೆಸ್‌, ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಕೀಳಾಗಿ ಕಾಣುವ ತನ್ನ ಪಿತೂರಿಯ ಭಾಗವಾಗಿ ಹಿಂದು ಧರ್ಮವನ್ನು ಅವಮಾನಿಸುತ್ತಿದೆ; ಇದರ ಪರಿಣಾಮ ಗಂಭೀರವಾದೀತು’ ಎಂಬ ಎಚ್ಚರಿಕೆಯನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಗೆ ನೀಡಿದೆ. 

Advertisement

ತರೂರ್‌ ನಿನ್ನೆ ಗುರುವಾರ ಮಾಡಿರುವ ವಿವಾದಿತ ಟ್ವೀಟ್‌ನಲ್ಲಿ “ಹಿಂದಿ, ಹಿಂದು, ಹಿಂದುತ್ವದ ಸಿದ್ಧಾಂತವು ದೇಶವನ್ನು ವಿಭಜಿಸುವಂತಿದೆ. ನಮಗೆ ಬೇಕಿರುವುದು ಏಕತೆ ಮತ್ತು ಏಕರೂಪತೆ’ ಎಂದು ಹೇಳಿದ್ದರು. 

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಅವರು “ತರೂರ್‌ ಅವರ ಟ್ವೀಟ್‌ ತುಂಬ ಆಕ್ಷೇಪಾರ್ಹವಾಗಿದೆ; ನಾವು ಅವರ ಈ ಟೀಕೆಯನ್ನು ಕಾಂಗ್ರೆಸ್‌ ಪಕ್ಷದ ಟೀಕೆ ಎಂದೇ ಪರಿಗಣಿಸುತ್ತೇವೆ; ಏಕೆಂದರೆ ತರೂರ್‌ ಅವರು ರಾಹುಲ್‌ ಗಾಂಧಿ ಅವರ ನೀಲಿ ಕಂಗಳ ಆಪ್ತನೆಂದೇ ನಾವು ತಿಳಿಯುತ್ತೇವೆ. ಶಶಿ ತರೂರ್‌ ಹೇಳುವುದನ್ನೆಲ್ಲ ಕಾಂಗ್ರೆಸ್‌ ಯಾವತ್ತೂ ಒಪ್ಪಿಕೊಂಡಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next