Advertisement

ರಥಯಾತ್ರೆ ಮೂಲಕ ಬಿಜೆಪಿಯಿಂದ ಧಾರ್ಮಿಕ ಜನವಿಭಜನೆ: ಪಶ್ಚಿಮ ಬಂಗಾಲ ಸಚಿವ

07:23 PM Dec 04, 2018 | Team Udayavani |

ಕೋಲ್ಕತ : ಈ ವಾರ ಆರಂಭವಾಗಲಿರುವ ರಥಯಾತ್ರೆ ಕಾರ್ಯಕ್ರಮದ ಮೂಲಕ ಬಿಜೆಪಿ ರಾಜ್ಯದಲ್ಲಿ ಕೋಮು ಉದ್ರಿಕ್ತತೆಯನ್ನು ಭುಗಿಲೆಬ್ಬಿಸಲು ಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಲ ಸಚಿವ ಮತ್ತು ಪ್ರಮುಖ ಅಲ್ಪಸಂಖ್ಯಾಕ ನಾಯಕ ಸಿದ್ದಿಕ್‌ ಉಲ್ಲಾ ಚೌಧರಿ ಅವರು ಆರೋಪಿಸಿದ್ದಾರೆ.

Advertisement

2019ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಪಶ್ಚಿಮ ಬಂಗಾಲದಲ್ಲಿ ಮೂರು ರಥಯಾತ್ರೆಗಳನ್ನು ಆಯೋಜಿಸಿದ್ದು ಇದು ರಾಜ್ಯದ ಎಲ್ಲ 42 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ. ಮೊದಲ ರಥಯಾತ್ರೆಯ ಇದೇ ಶುಕ್ರವಾರ ಆರಂಭವಾಗುತ್ತದೆ. 

ಬಿಜೆಪಿಯ ಮುಖ್ಯ ಗುರಿಯೇ ಜನರನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವುದಾಗಿದೆ ಮತ್ತು ಈ ಉದ್ದೇಶಕ್ಕಾಗಿ ಅದು ರಥಯಾತ್ರೆಯನ್ನು ಆಯೋಜಿಸಿದೆ ಎಂದು ಚೌಧರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next