Advertisement

ಒಡಿಶಾ ಚುನಾವಣೆ ಬಿಜೆಪಿ ಏಕಾಂಗಿ ಹೋರಾಟ: ಅಮಿತ್‌ ಶಾ

05:27 PM Sep 07, 2017 | udayavani editorial |

ಭುವನೇಶ್ವರ : ಭಾರತೀಯ ಜನತಾ ಪಾರ್ಟಿ ಮುಂಬಯಿ ಒಡಿಶಾ ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಹೋರಾಡಲಿದೆ ಎಂದು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. 

Advertisement

ಒಡಿಶಾ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಯಾವುದೇ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡಲಿದೆ ಎಂದು ಅಮಿತ್‌ ಶಾ ಪ್ರಕಟಿಸಿದರು. 

ಬಿಜೆಪಿಯ ಮಿಷನ್‌ 120 ಯೋಜನೆಯನ್ನು ಅನಾವರಣಗೊಳಿಸಿ ಮಾತನಾಡಿದ ಅಮಿತ್‌ ಶಾ, ಒಡಿಶಾದಲ್ಲಿ ಬಿಜೆಪಿ ಮೂರನೇ ಎರಡಂಶ ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆಯನ್ನು ಏರುವುದು ನಿಶ್ಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ಸುದ್ದಿ ನಿಯತಕಾಲಿಕ ಕೊಟ್ಟಿರುವ ಬೆಸ್ಟ್‌ ಅಡ್ಮಿನಿಸ್ಟ್ರೇಟರ್‌ ಪ್ರಶಸ್ತಿಯನ್ನು ಸಂಭ್ರಮಿಸುತ್ತಿರುವ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರನ್ನು ಅಮಿತಾ ಶಾ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next