Advertisement

Bajpe: ಅಂಗನವಾಡಿ ಕೇಂದ್ರದಲ್ಲಿ ಕಳವು

01:07 AM Jan 17, 2024 | Team Udayavani |

ಬಜಪೆ: ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಬಾಗಿಲಿನ ಬೀಗ ಮುರಿದು ಅಂಗನವಾಡಿ ಮಕ್ಕಳಿಗೆ ನೀಡಲು ಇರಿಸಿದ್ದ ಮೊಟ್ಟೆ , ಹೆಸರು ಕಾಳು, ಬೆಲ್ಲ, ಸಕ್ಕರೆ, ಕುಕ್ಕರ್‌,ಫ್ಯಾನ್‌ಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

Advertisement

ಜ. 13ರ ಶನಿವಾರ ಬೀಗ ಹಾಕಿ ತೆರಳಿದ್ದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಂಗಳವಾರ ಬೆಳಗ್ಗೆ ಬಂದಾಗ ಬಾಗಿಲಿನ ಬೀಗ ಮುರಿದಿತ್ತು. ಕೇಂದ್ರದ ಒಳಗಿದ್ದ ಕವಾಟಿನ ಬೀಗ ಮುರಿದು ಅದರಲ್ಲಿದ್ದ ನಗದು, ಕುಕ್ಕರ್‌, ದಾನಿಗಳು ನೀಡಿದ ಫ್ಯಾನ್‌ ಹಾಗೂ ಮೊಟ್ಟೆ, ಹೆಸರು ಕಾಳು, ಬೆಲ್ಲ, ಸಕ್ಕರೆಯನ್ನು ಕಳವು ಮಾಡಿರುವುದು ತಿಳಿಯಿತು.

ಬಜಪೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಆಗಮಿಸಿ, ಸಿಸಿ ಕೆಮರಾ ಪರಿಶೀಲನಡೆ ನಡೆಸಿದ್ದು ಕೆಲವರನ್ನು ವಿಚಾರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next