Advertisement

ಹಿಂದಿನ ಸರಕಾರದ ಯೋಜನೆ ನಿಲ್ಲಿಸಿದ BJP: ಬಯ್ನಾಪುರ

08:43 AM Apr 23, 2023 | Team Udayavani |

ಕುಷ್ಟಗಿ: ಬಿಜೆಪಿ ಸರಕಾರ ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯ ಯೋಜನೆಗಳಾದ ಅನ್ನ ಭಾಗ್ಯ ಹೊರತುಪಡಿಸಿ, ಕೃಷಿ ಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮುಂತಾದ ಹಲವಾರು ಯೋಜನೆಗಳನ್ನು ತೆಗೆದು ಹಾಕಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ನಾಪುರ ಹೇಳಿದರು.

Advertisement

ತಾಲೂಕಿನ ಹೊನಗಡ್ಡಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅನ್ನಭಾಗ್ಯ ಯೋಜನೆ ಉಳಿಸಿ ಎಲ್ಲ ಯೋಜನೆಗಳನ್ನು ತೆಗೆದು ಹಾಕಿದ್ದಾರೆ. ಒಂದು ವೇಳೆ ಅನ್ನಭಾಗ್ಯ ಯೋಜನೆ ತೆಗೆದು ಹಾಕಿದರೆ ಬಿಜೆಪಿಯವರನ್ನು ಊರೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ವಿದ್ಯಾಸಿರಿ ಯೋಜನೆಯಡಿ ವಸತಿ ನಿಲಯದಿಂದ ವಂಚಿತರಾಗುವ ಮಕ್ಕಳಿಗಾಗಿ ತಿಂಗಳಿಗೆ 1,500 ರೂ. ಯಂತೆ 10 ತಿಂಗಳಿಗೆ 15 ಸಾವಿರ ರೂ. ನೀಡಲಾಗುತ್ತಿತ್ತು. ಅದನ್ನು ರದ್ದುಗೊಳಿಸಿದ್ದಾರೆ. ಇದರಿಂದ ಶ್ರೀಮಂತರಿಗೆ ಅನ್ಯಾಯವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಬಡ ರೈತ, ಕೂಲಿಕಾರರ ಮಕ್ಕಳಿಗೆ ಅನ್ಯಾಯವಾಗಿದೆ. ಶ್ರೀಮಂತರ ಮಕ್ಕಳು ವಸತಿ ನಿಲಯಕ್ಕೆ ಅರ್ಜಿ ಹಾಕುವುದಿಲ್ಲ. ಈ ಹಿನ್ನೆಲೆಯಲ್ಲಿ ಎಂತಹ ಆಡಳಿತ ಬೇಕೆನ್ನುವುದರ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next