Advertisement

ಪಂಜಾಬಿನಲ್ಲಿ ಸಿಧು ಮತ್ತು ಚನ್ನಿ, ರಾಜ್ಯದಲ್ಲಿ…: ಕಾಂಗ್ರೆಸ್ ಗೆ ಬಿಜೆಪಿ ಟ್ವೀಟ್ ಅಸ್ತ್ರ

06:12 PM Mar 11, 2022 | Team Udayavani |

ಬೆಂಗಳೂರು : ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ಕಡೆ ಸರಕಾರ ರಚಿಸುತ್ತಿರುವ ಸಂಭ್ರಮದಲ್ಲಿರುವ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಟ್ವೀಟ್ ಗಳ ಮೂಲಕ ಟಾಂಗ್ ನೀಡಿದೆ.

Advertisement

ಕಾಂಗ್ರೆಸ್ ಪಕ್ಷಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ. ಸಿಧು ಮತ್ತು ಚನ್ನಿ ಆಂತರಿಕ ಕಲಹದ ಪ್ರತಿಫಲವಾಗಿ ಪಂಜಾಬಿನಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನೆಲ ಕಚ್ಚಲಿದೆ. ಡಿಕೆಶಿ ಹಾಗೂ ಸಿದ್ದು ಅವರ ನಡುವಿನ ಕಲಹದಿಂದಾಗಿ ವಿಪಕ್ಷ ಸ್ಥಾನವನ್ನೇ ಭದ್ರಪಡಿಸಿಕೊಳ್ಳಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಿಸುತ್ತಿದ್ದೇವೆ ಎಂದು ಬರೆದಿದೆ.

ಪಂಚ ರಾಜ್ಯದ ಫಲಿತಾಂಶದಿಂದ ಒಂದು ವಿಚಾರ ಸ್ಪಷ್ಟವಾಗಿದೆ.ಕಾಂಗ್ರೆಸ್ ಪಕ್ಷವು, ಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ ಎಂಬ ತೀರ್ಪನ್ನು ಮತದಾರರು ನೀಡಿದ್ದಾರೆ. ಶತಮಾನದ ಇತಿಹಾಸ ಇರುವ ಪಕ್ಷ, ಇತಿಹಾಸ ಪುಟ ಸೇರುವ ಸಮಯ ಬಂದಾಗಿದೆ ಎಂದು ಇನ್ನೊಂದು ಟ್ವೀಟ್ ಮಾಡಿದೆ.

ಯುಪಿಯಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ‌ ದುರ್ಬಲವಾಗಿದೆ, ಪಕ್ಷ ಸಂಘಟನೆಯ ಕೊರತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಅಂದರೆ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಅವರು ವಿಫಲರಾಗಿದ್ದಾರೆ ಎನ್ನುವುದು ನಿಜವಾಗಿದೆ.ರಾಜ್ಯದಲ್ಲೇ ವಿಫಲರಾದವರನ್ನು ದೇಶದ ಪ್ರಧಾನಿಯಾಗಿ ಬಿಂಬಿಸುವುದು ಮೂರ್ಖತನವಲ್ಲವೇ? ಎಂದು ಪ್ರಶ್ನಿಸಿದೆ.

ಸುರಕ್ಷಿತ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಪಂಚರಾಜ್ಯಗಳ ಫಲಿತಾಂಶ ಬಂದ ನಂತರವೂ ಯಾವುದಾದರು ಕ್ಷೇತ್ರದಲ್ಲಿ ನಿಂತು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆಯೇ? ಕಾಂಗ್ರೆಸ್ ಸಾಧನೆ ಹೇಳುವುದು ಬಿಟ್ಟು ಬಿಜೆಪಿ ಸಾಧನೆಯ ಬಗ್ಗೆ ಪರಾಮರ್ಶಿಸಲು ನಾಚಿಗೆಯೆನಿಸುವುದಿಲ್ಲವೇ? ಎಂದು ವ್ಯಂಗ್ಯವಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next