Advertisement

ಬಿಜೆಪಿ ಸೀಟು ಕೊಡುಗೆ ಗೌರವಾರ್ಹವಾಗಿಲ್ಲ: ಕುಶವಾಹ ಅತೃಪ್ತಿ

04:10 PM Nov 17, 2018 | Team Udayavani |

ಪಟ್ನಾ : ಎನ್‌ಡಿಎ ಮಿತ್ರಪಕ್ಷವಾಗಿರುವ ಲೋಕ ಸಮತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಕುಶವಾಹ ಅವರು 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಕೊಟ್ಟಿರುವ ಸೀಟುಗಳ ಕೊಡುಗೆ ಸ್ವೀಕಾರಾರ್ಹವೂ ಗೌರವಾರ್ಹವೂ ಆಗಿಲ್ಲ ಎಂದು ಇಂದು ಶನಿವಾರ ಕಡ್ಡಿ ಮುರಿದಂತೆ ಹೇಳಿದ್ದಾರೆ.

Advertisement

ಹಾಗಿದ್ದರೂ ಬಿಜೆಪಿ ತನ್ನ ಮಿತ್ರ ಪಕ್ಷವಾಗಿರುವ ಆರ್‌ ಎಲ್‌ ಎಸ್‌ ಪಿ ಗೆ ಎಷ್ಟು ಸೀಟುಗಳನ್ನು ಕೊಟ್ಟಿದೆ ಎಂಬ ನಿಖರ ಸಂಖ್ಯೆಯನ್ನು ಕುಶವಾಹ ಬಹಿರಂಗಪಡಿಸಿಲ್ಲ.

ನವೆಂಬರ್‌ 30ಕ್ಕೆ ಮುನ್ನ ಬಿಹಾರದಲ್ಲಿನ ಎನ್‌ಡಿಎ ಮಿತ್ರ ಪಕ್ಷಗಳೊಳಗೆ ಸೀಟು ಹಂಚಿಕೆ ಒಪ್ಪಂದ ಅಂತಿಮವಾಗಿ ಏರ್ಪಡುವ ವರೆಗೆ ತಾನು ಏನನ್ನೂ ಹೇಳುವುದಿಲ್ಲ ಎಂದು ಕುಶವಾಹ ತಮ್ಮೊಳಗಿನ ಅಸಮಾಧಾನವನ್ನು ತಮ್ಮೊಳಗೇ ಒತ್ತಿಟ್ಟುಕೊಂಡರು. 

ಅಂದ ಹಾಗೆ ಕುಶವಾಹ ಮತ್ತು ಬಿಹಾರ ಸಿಎಂ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರೊಳಗಿನ ಸಂಬಂಧಗಳು ಈಚೆಗೆ ಹದಗೆಟ್ಟಿವೆ. 

Advertisement

Udayavani is now on Telegram. Click here to join our channel and stay updated with the latest news.

Next