Advertisement

BJP ಮೇಲುಗೈ; ಮತ್ತೊಮ್ಮೆ ಧಾರವಾಡ ಕೆಎಂಎಫ್‌ಗೆ ಶಂಕರ ಮುಗದ ಅಧ್ಯಕ್ಷ

06:52 PM Jul 12, 2024 | Team Udayavani |

ಧಾರವಾಡ : ಕೈ ಮತ್ತು ಕಮಲ ಪಡೆಯ ಜಿದ್ದಾಜಿದ್ದಿನ ರಾಜಕಾರಣದ ತಾಣವಾಗಿದ್ದ ಧಾರವಾಡ ಕೆಎಂಎಫ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಂಕರ ಮುಗದ ಆಯ್ಕೆಯಾಗಿದ್ದಾರೆ.

Advertisement

ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಿರಸಿಯ ಸುರೇಶಚಂದ್ರ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಇಬ್ಬರು ಮುಂದಿನ ಐದು ವರ್ಷಗಳ ಅವಧಿಗೆ ಧಾರವಾಡ ಕೆಎಂಎಫ್ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಬಿಜೆಪಿ ಪಡೆಗೆ ತೀವ್ರ ರಾಜಕೀಯ ಸ್ಪರ್ಧೆ ಒಡ್ಡಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು 6ಮತಗಳನ್ನು ಪಡೆದುಕೊಳ್ಳುವ ಮೂಲಕ ಚುನಾವಣೆಯಲ್ಲಿ ಪರಾಭವಗೊಂಡರು.

ಮಧ್ಯಾಹ್ನ ನಾಮಪತ್ರ ಸಲ್ಲಿಕೆಗೂ ಮುಂಚೆಯೇ ಬಿಜೆಪಿಯ ಎಲ್ಲಾ ಎಂಟು ಜನ ಸದಸ್ಯರು ಕೂಡ ಒಟ್ಟಾಗಿಯೇ ಬಂದಿದ್ದು, ಚುನಾವಣೆ ಮುಗಿದು ಜಯ ಸಾಧಿಸುವ ವರೆಗೂ ಒಗ್ಗಟ್ಟಿನಿಂದಲೇ ಇದ್ದಿದ್ದು ಬಿಜೆಪಿ ಬೆಂಬಲಿತರ ಗೆಲುವಿಗೆ ಕಾರಣವಾಯಿತು. ಕಾಂಗ್ರೆಸ್ ಬೆಂಬಲಿತರು ಕೂಡ ಒಟ್ಟಾಗಿಯೇ ಬಂದು ಶಿವಲೀಲಾ ಕುಲಕರ್ಣಿ ಅವರ ನಾಮಪತ್ರ ಸಲ್ಲಿಸಿದರು.ಅಂತಿಮವಾಗಿ ಚುನಾವಣೆಯಲ್ಲಿ ನಿರೀಕ್ಷೆ ಯಂತೆ ಬಿಜೆಪಿ ಬೆಂಬಲಿತರು ಎಂಟು ಮತಗಳನ್ನು ಪಡೆದು ಆಯ್ಕೆ ಯಾದರು.

Advertisement

Udayavani is now on Telegram. Click here to join our channel and stay updated with the latest news.

Next