Advertisement

ಪ್ರತಿಭಟನೆಗೆ ಬಿಜೆಪಿ ಸಜ್ಜು

06:25 AM Dec 18, 2018 | Team Udayavani |

ಕೋಲ್ಕತ್ತಾ: ರಥಯಾತ್ರೆಗೆ ಅನುಮತಿ ನೀಡದೇ ಇರುವ ಪಶ್ಚಿಮ ಬಂಗಾಲ ಸರಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ. 

Advertisement

ಅದರಂತೆ, ಸೋಮವಾರ ಅರಂಗಡ ಪ್ರದೇಶದಲ್ಲಿ ಗಣತಂತ್ರ ಬಚಾವೋ ಎಂಬ ಕಾರ್ಯಕ್ರಮವನ್ನು ನಡೆಸಲಾಗಿದೆ. ಪ್ರತಿಭಟನಾ ರ್ಯಾಲಿಗಳನ್ನು ತಡೆಯಲು ಸರಕಾರವೇನಾದರೂ ಪ್ರಯತ್ನಿಸಿದರೆ, ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ. ರಥಯಾತ್ರೆಗೆ ಅನುಮತಿ ನೀಡಿದರೆ ಕೋಮುಗಲಭೆ ಉಂಟಾಗಬಹುದು ಎಂಬ ಕಾರಣ ಹೇಳಿ ಮಮತಾ ಸರಕಾರವು ಶನಿವಾರವೇ ಬಿಜೆಪಿ ರಥಯಾತ್ರೆಗೆ ನಿರಾಕರಿಸಿದೆ. ಇದೇ ವೇಳೆ, ಸರಕಾರದ ಈ ನಿರ್ಧಾರ ಖಂಡಿಸಿ ಬಿಜೆಪಿ ಸೋಮವಾರ ಕಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿದೆ.
 

Advertisement

Udayavani is now on Telegram. Click here to join our channel and stay updated with the latest news.

Next