Advertisement

Sonia Gandhi: ಸೋನಿಯಾ ವಿರುದ್ಧ ಮುಗಿಬಿದ್ದ ಬಿಜೆಪಿ

11:38 PM Apr 11, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಬರೆದ ಲೇಖನವು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ.

Advertisement

“ಪ್ರಧಾನಿ ಮೋದಿ ಹಾಗೂ ಬಿಜೆಪಿಯು ಭಾರತದ ಪ್ರಜಾಸತ್ತೆಯ ಎಲ್ಲ ಮೂರೂ ಸ್ತಂಭಗಳನ್ನು ವ್ಯವಸ್ಥಿತವಾಗಿ ಧ್ವಂಸಗೈಯ್ಯುತ್ತಿದ್ದಾರೆ. ಉಳಿದವರ ಬಾಯಿ ಮುಚ್ಚಿಸುವುದರಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ’ ಎಂದು ಸೋನಿಯಾ ಅವರು ಸಂಪಾದಕೀಯ ಪುಟದಲ್ಲಿ ಬರೆದ ಲೇಖನದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸೋನಿಯಾ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು, “ದೇಶದ ಪ್ರಜಾಸತ್ತೆ ಸತ್ತಿದ್ದು ಒಂದೇ ಬಾರಿ. ಅದು 1975ರಲ್ಲಿ. ತದನಂತರ ಎಂದೂ ಆ ರೀತಿ ಆಗಿಲ್ಲ. ನೀವು ನಮಗೆ ಪ್ರಜಾಸತ್ತೆಯ ಪಾಠ ಮಾಡಬೇಕಾಗಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next