Advertisement

BJP: ನನ್ನಲ್ಲೂ ಪ್ರಶ್ನೆಗಳಿವೆ, ಆದರೆ ಅದಕ್ಕೆ ಈಗ ಉತ್ತರಿಸಲಾಗದು: ಸಿ.ಟಿ.ರವಿ

12:21 AM Nov 12, 2023 | Team Udayavani |

ಬೆಂಗಳೂರು: “ನಿಮ್ಮಂತೆ ಕೆಲ ಪ್ರಶ್ನೆಗಳು ನನ್ನನ್ನೂ ಕಾಡುತ್ತಿವೆ. ಈಗ ಉತ್ತರಿಸಿದರೆ ಅಪಾ ರ್ಥ ವಾಗುತ್ತದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂಬ ನಿಟ್ಟಿನಲ್ಲಿ ನಾನೂ ಕೆಲಸ ಮಾಡುತ್ತೇನೆ’ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ವಿಚಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ನಾವು ವೈಚಾರಿಕ ಹಿನ್ನೆಲೆಯಲ್ಲಿ ರಾಜಕಾರಣ ಮಾಡುತ್ತೇವೆ. ಪಕ್ಷದ ಒಳಗಿನ ವೇದಿಕೆಯಲ್ಲಿ ಮುಂದೆ ಚರ್ಚೆ, ಪ್ರಶ್ನೆ ಮಾಡಬಹುದು. ಈಗ ಮಾತನಾಡುವುದಿಲ್ಲ. ನಾನು ಮಾತನಾಡಿದರೆ ಅದು ಬಿಸಿಬಿಸಿ ಸುದ್ದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕ ಮೆರಿಟ್‌ ಆಧಾರದ ಮೇಲೆ ಆಗಿದೆಯೋ, ಜಾತಿ ಆಧಾರದಲ್ಲಿ ಆಗಿದೆಯೋ ಎಂಬ ಪ್ರಶ್ನೆಗೆ, ನಾನು ಇದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನೀವು ನನ್ನನ್ನು ಸಿಲುಕಿಸಿ ಹಾಕಲು ಪ್ರಯತ್ನಿಸಬೇಡಿ. ಮಾತೇ ನನಗೆ ತಿರುಗುಬಾಣ ವಾಗಬ ಹುದು ಎಂದರು. ವಿಪಕ್ಷ ನಾಯಕ ಸ್ಥಾನವನ್ನು ಸಮರ್ಥರಾದವರಿಗೆ ನೀಡಬೇಕು. ಜಾತಿಗೆ ಸೀಮಿತವಾಗಿ ನೋಡಬಾರದು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next