Advertisement

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

12:27 PM Apr 09, 2018 | |

ಭಾಲ್ಕಿ: ಪಟ್ಟಣದ ಭೀಮ ನಗರ ಬಡಾವಣೆಯ ಬಿಜೆಪಿ ಕಾರ್ಯಕರ್ತ ಸಂತೋಷ ಬೆಲೂರೆ ಹಾಗೂ ಅವರ ಸಂಗಡಿಗರು ಬಿಜೆಪಿ ತೊರೆದು ಸಚಿವ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು.

Advertisement

ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್‌ ಪಕ್ಷ ದೀನ ದಲಿತರ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ಹಾಗೂ ಎಲ್ಲಾ ಸಮುದಾಯದವರ ಏಳ್ಗೆಗಾಗಿ ದುಡಿಯುವ ಪಕ್ಷವಾಗಿದೆ. ಅಲ್ಲದೆ ಭಾಲ್ಕಿಯಲ್ಲಿನ ಪ್ರಗತಿ ಪರ ಕಾರ್ಯಗಳನ್ನು ಮೆಚ್ಚಿ ಸಾಕಷ್ಟು ಜನರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನೂ ಹಲವಾರು ಜನರು ಕೈ ಜೋಡಿಸಲಿದ್ದಾರೆ ಎಂದು ಹೇಳಿದರು.

ಸಂತೋಷ ಬೇಲೂರೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ತತ್ವ ಸಿದ್ದಾಂತ ಅರಿತು, ಅವರ ಅಧಿಕಾರದ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಕಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂದೆಯೂ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಟೆಯಿಂದ ದುಡಿಯುತ್ತೇನೆ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಜೈಪಾಲ ಬೂರಾಳೆ, ಸಚಿನ ಅಂಬೆಸಂಗೆ, ಸುನೀಲ ವಾಂಜ್ರೆ, ಮಾಲತೇಶ ವಜ್ರೆ, ಭರತ ಸಿದ್ದಾ, ಕಿರಣ ಪ್ಯಾಗೆ, ಟಿಂಕು ರಾಜಭವನ, ಅಶೋಕ ಸಿಂದೆ, ಪದ್ಮಾನಂದ ಗಾಯಕವಾಡ, ದೀಕ್ಷಿತ ಮೋರೆ, ರಿತೇಶ ಗಾಯಕವಾಡ, ಎಲಿಯಾಜ್‌, ಎಂ.ಡಿ. ಸಯೀದ್‌, ರಾಹುಲ್‌ ಬೌದ್ಧೆ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next