Advertisement

BJP; ಸಂಖ್ಯಾಬಲದ ಕೊರತೆ: ಗುಜರಾತ್‌ನಿಂದ ಕಣಕ್ಕಿಳಿಯಲಿರುವ ನಡ್ಡಾ

05:28 PM Feb 14, 2024 | Team Udayavani |

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಬುಧವಾರ ಗುಜರಾತ್‌ನಿಂದ ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಹೆಸರಿಸಲಾಗಿದೆ. ನಡ್ಡಾ ಪ್ರಸ್ತುತ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದು, ಕಾಂಗ್ರೆಸ್ ಆಡಳಿತವಿರುವ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲುವ ಸಂಖ್ಯಾಬಲ ಬಿಜೆಪಿಗೆ ಇಲ್ಲದ ಕಾರಣ ಗುಜರಾತ್ ನತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಮಹಾರಾಷ್ಟ್ರದಿಂದ ಕಾಂಗ್ರೆಸ್ ತೊರೆದು ಬಂದ ಮಾಜಿ ಸಿಎಂ ಅಶೋಕ್ ಚವಾಣ್ ಅವರನ್ನು ಪಕ್ಷ ತೊರೆದು ಬಂದ ವಾರದ ಒಳಗೆ ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯನ್ನಾಗಿಸಿದೆ.

ಇನ್ನೊಂದೆಡೆ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನೆ ರಾಜ್ಯಸಭಾ ಚುನಾವಣೆಗೆ ತಮ್ಮ ಅಭ್ಯರ್ಥಿಯಾಗಿ ಮಿಲಿಂದ್ ದಿಯೋರಾ ಅವರನ್ನು ಬುಧವಾರ ನಾಮನಿರ್ದೇಶನ ಮಾಡಿದೆ.ಜ 14 ರಂದು ಅವರು ಕಾಂಗ್ರೆಸ್ ತೊರೆದು ಶಿವಸೇನೆಗೆ ಸೇರಿದ ಒಂದು ತಿಂಗಳ ನಂತರ ಅವರಿಗೆ ದೊಡ್ಡ ಅವಕಾಶ ನೀಡಲಾಗಿದೆ.

ಗುಜರಾತ್ ನಿಂದ ಗೋವಿಂದ್ ಧೋಲಾಕಿಯ, ಮಾಯಾಂಕ್ ಭಾಯಿ ನಾಯಕ್ , ಜಸ್ವಂತ್ ಸಲಾಂ ಸಿನ್ಹ ಪಾರ್ಮರ್ ಅಭ್ಯರ್ಥಿಯಾಗಿದ್ದಾರೆ. ಮಹಾರಾಷ್ಟ್ರದಿಂದ ಮೇಧಾ ಕುಲಕರ್ಣಿ, ಡಾ. ಅಜಿತ್ ಗೋಪ್ಚಡೆ ಅಭ್ಯರ್ಥಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next