Advertisement

BJP; ಯಡಿಯೂರಪ್ಪ ಸ್ವಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ನಡೆಸಿದ ಈಶ್ವರಪ್ಪ ಅಭಿಮಾನಿಗಳು

06:10 PM Mar 24, 2024 | Vishnudas Patil |

ಶಿಕಾರಿಪುರ : ‘ಬ್ರಹ್ಮ ಬಂದು ಹೇಳಿದರೂ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’ ಎಂದು ಬಿಜೆಪಿ ವಿರುದ್ಧ ಬಂಡಾಯ ಸ್ಪರ್ಧೆ ಘೋಷಿಸಿ ಪ್ರಚಾರಕ್ಕಿಳಿದಿರುವ ಮಾಜಿ ಡಿಸಿಎಂ, ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಭಾನುವಾರ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಬೆಂಬಲಿಗರೊಂದಿಗೆ ಬೃಹತ್ ಬೈಕ್ ರ‍್ಯಾಲಿ ನಡೆಸಿ ಬಲ ಪ್ರದರ್ಶನ ಮಾಡಿದ್ದಾರೆ.

Advertisement

ಶಿಕಾರಿಪುರ ಹುಚ್ಚರಾಯಸ್ವಾಮಿಗೆ ಪೂಜೆ ಸಲ್ಲಿಸಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಗಿಡ್ಡೇಶ್ವರ ದೇವಸ್ಥಾನದ ವರೆಗೂ ಬೈಕ್ ರ‍್ಯಾಲಿ ನಡೆಯಿತು. ಈಶ್ವರಪ್ಪ ಅವರು ತೆರೆದ ವಾಹನದಲ್ಲಿ ಪುತ್ರ ಕಾಂತೇಶ್ ಅವರೊಂದಿಗೆ ರೋಡ್ ಶೋ ನಲ್ಲಿ ಭಾಗಿಯಾದರು. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು, ಬಿಜೆಪಿ ನಿರ್ಧಾರದ ವಿರುದ್ಧ ಆಕ್ರೋಶ ಗೊಂಡಿರುವ ಹಲವು ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಬೈಕ್ ರಾಲಿ ವೇಳೆ ಕಾರ್ಯಕರ್ತರು ಬೈಕ್ ಗಳಿಗೆ ಭಾಗವಾಧ್ವಜಗಳನ್ನು ಕಟ್ಟಿಕೊಂಡು ಕೇಸರಿ ಶಾಲುಗಳನ್ನು ಧರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next